ಬೆಂಗಳೂರು : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಜಯೇಂದ್ರ ಆಯ್ಕೆ ಇದು ಸ್ವಜನಪಕ್ಷಪಾತ ಎಂದು ಕುಟುಕಿದ್ದಾರೆ.
ಮಗನನ್ನು ನಿಯೋಜಿಸುವ ಬಗ್ಗೆ ಹೇಳುವಾಗ ನೆನಪಿಗೆ ಬಂತು ಬಿಜೆಪಿಯ ಸ್ವಜನಪಕ್ಷಪಾತದ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ ಎಂಬುದು. ಕರ್ನಾಟಕದಲ್ಲಿ ಪೂರ್ತಿ ಗುಡಿಸಿ ಸಾರಿಸಿದ ನಂತರ ಇದೀಗ ಬಿಜೆಪಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದು ಚಾಟಿ ಬೀಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತಮ್ಮ ಭಾಷಣದಲ್ಲಿ ಬಡಾಯಿ ಬಿಡುತ್ತಲೇ ಇರುತ್ತಾರೆ. ಅವರ ಸ್ವಂತ ಪಕ್ಷದವರು ಅಥವಾ ಮನೆಯಲ್ಲಿ ಯಾರೂ ಕೇಳದಿದ್ದರೂ ಸಹ. ಆದರೆ, ಈಗ ದೇಶದ ಜನತೆ ಸುಳ್ಳು, ಲೂಟಿ, ವಂಚನೆಯಿಂದ ಕೂಡಿರುವ ಬಿಜೆಪಿಯನ್ನು ಸಂಪೂರ್ಣವಾಗಿ ಅಸಮಾಧಾನಗೊಳಿಸಿ ಹೊರಹಾಕಲು ಸಿದ್ಧರಾಗಿದ್ದಾರೆ. ಮೊದಲು ಮಧ್ಯಪ್ರದೇಶ, ನಂತರ ದೇಶ ಬರುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
“बेटों को सेट करने” से याद आया..भाजपा के परिवारवाद की लिस्ट में एक नाम और जुड़ गया है।
कर्नाटक में सूपड़ा साफ होने के बाद अब भाजपा ने पूर्व सीएम बीएस येदुरप्पा जी के बेटे को प्रदेश अध्यक्ष बना दिया है।
मगर मोदी जी और अमित शाह भाषणों में जुमले सुनाते रहेंगे, भले अपनी ही पार्टी… pic.twitter.com/Yzx8F1CA5Y
— Randeep Singh Surjewala (@rssurjewala) November 11, 2023