Sunday, May 5, 2024

ಕಿಡಿಗೇಡಿಗಳಿಂದ ಹಿಂದೂ ಕಟ್ಟೆಯಲ್ಲಿ ಮುಸ್ಲಿಂ ಬಾವುಟ ಸ್ಥಾಪನೆ!

ದಕ್ಷಿಣ ಕನ್ನಡ : ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚಮೊಗರು ಎಂಬಲ್ಲಿ ಹಿಂದೂಗಳ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಕೆಲ ಕಿಡಿಗೇಡಿಗಳು ಗಲಭೆಗೆ ಯತ್ನಿಸಿದ್ದಾರೆ. ಸೆಪ್ಟೆಂಬರ್​ 30ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈದ್ ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ ಇಟ್ಟಿದ್ದಾರೆ. ಇನ್ನು ಈ ಘಟನೆ ಕುರಿತು ಹೊಸಬೆಟ್ಟು PDO ಶೇಖರ್ ಗಮನಕ್ಕೆ ತಂದರೂ ಸಹ PDO ನಿರ್ಲಕ್ಷ್ಯವಹಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡುಬಿದ್ರೆ ಇನ್ಸ್‌ಪೆಕ್ಟರ್ P.G.ಸಂದೇಶ್ ಭೇಟಿ ನೀಡಿ, ಬಾವುಟ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ಯುವತಿ ಆತ್ಮಹತ್ಯೆ: ದೂರು ದಾಖಲಿಸಲು ಹಿಂದೇಟು, PSI ಅಮಾನತು!

PDO ವರ್ತನೆಗೆ ಇನ್ಸ್‌ಪೆಕ್ಟರ್ ಸಂದೇಶ್ ಕೆಂಡಾಮಂಡಲರಾಗಿದ್ದಾರೆ. ಇದರ ಮೇಲೆ‌ ಬಾವುಟ ಹಾಕಲು ಅನುಮತಿ ತೆಗೊಂಡಿದ್ದಾರಾ? ನಿನ್ನ ಕೆಲಸ ಏನು ಅಂತ ನಿನಗೆ ಗೊತ್ತಿಲ್ಲವೆಂದ ಮೇಲೆ ಏನ್​​ ಮಾಡ್ತಿದ್ದೀಯಾ ಎಂದು PDO ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES