Sunday, April 28, 2024

ಸಾಮೂಹಿಕವಾಗಿ ಕೈ ಕೊಯ್ದುಕೊಂಡ 14 ವಿದ್ಯಾರ್ಥಿನಿಯರು!

ಉತ್ತರ ಕನ್ನಡ: ವಿಧ್ಯಾರ್ಥಿನಿಯರು ಸಾಮೂಹಿಕವಾಗಿ ಕೈ ಕೊಯ್ದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ಶಾಲೆಯಲ್ಲಿ ನಡೆದಿದೆ.

9ನೇ ತರಗತಿಯ ಒಟ್ಟು 14 ವಿದ್ಯಾರ್ಥಿನಿಯರು ಕೈ ಕೊಯ್ದುಕೊಂಡಿದ್ದಾರೆ. ವಿದ್ಯಾರ್ಥಿಗಳು ಆನ್​​ಲೈನ್ ಗೇಮ್‌ ಚಟಕ್ಕೆ ಬಿದ್ದು ಕೈ ಕೊಯ್ದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೈ ಮೇಲೆ ಸೇಫ್ಟಿ ಪಿನ್​ನಿಂದ ವಿದ್ಯಾರ್ಥಿಗಳು ಗೀರಿಕೊಂಡಿದ್ದಾರೆ. ಇನ್ನು ವಿಧ್ಯಾರ್ಥಿಗಳನ್ನ ಕೇಳಿದರೆ ಬೇರೆನೆ ಉತ್ತರ ನೀಡಿದ್ದಾರೆ. ವಿದ್ಯಾರ್ಥಿನಿಯರ ನಡವಳಿಕೆ ಬಗ್ಗೆ ಪಾಲಕರಲ್ಲಿ ಆತಂಕಕ್ಕೆ ಮನೆ ಮಾಡಿದೆ.

ಇದನ್ನೂ ಓದಿ: ತಮಿಳು ನಟ ವಿಜಯ್​ ಆಂಟನಿ ಮಗಳು ಆತ್ಮಹತ್ಯೆ!

ಸದ್ಯ ಈ ಬಗ್ಗೆ ಪೋಲಿಸ್ ಇಲಾಖೆಯಿಂದ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಒಬ್ಬೊಬ್ಬ ವಿದ್ಯಾರ್ಥಿಯಿಂದ ಒಂದೊಂದು ಉತ್ತರ ನೀಡುತ್ತಿದ್ದಾರೆ. ಇನ್ನು ಈ ಘಟ‌ನೆ ಬೆಳಕಿಗೆ ಬರುತ್ತಿದ್ದಂತೆ ಕೂಡಲೆ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರು ಪಾಲಕರ ಸಭೆ ನಡೆಸಿದ್ದಾರೆ. ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES