Wednesday, May 1, 2024

ಕಾರು ಇದ್ದವರಿಗೂ BPL ಕಾರ್ಡ್? : ಸಚಿವ ಮುನಿಯಪ್ಪ ಸ್ಪಷ್ಟನೆ

ದಾವಣಗೆರೆ : ಕಾರು ಇದ್ದವರಿಗೆ ಬಿಪಿಎಲ್​ ಕಾರ್ಡ್ ರದ್ದುಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಾವು ಅದನ್ನು ವಿಚಾರ ಮಾಡುತಿದ್ದೇವೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದೀಗ ಎಲ್ಲ ಕಾರ್ಡ್ ದಾರರಿಗೂ ಅಕ್ಕಿ ಕೊಡಲು ಹೇಳಿದ್ದೇವೆ. ಕಾರು ಇದ್ದವರಿಗೆ ಕಾರ್ಡ್ ರದ್ದತಿ ಮಾಡೋ ಬಗ್ಗೆ ಯೋಚನೆ ಮಾಡ್ತೀವಿ ಎಂದು ಹೇಳಿದ್ದಾರೆ.

ನಾಳೆ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗೃಹಲಕ್ಷ್ಮೀಗೆ ಚಾಲನೆ ಸಿಗಲಿದೆ. ಈಗಾಗಲೇ ಮೂರು ಯೋಜನೆಗೆ ಚಾಲನೆ ಸಿಕ್ಕಿದೆ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಹಿನ್ನೆಲೆ ನಾವು ದುಡ್ಡು ಕೊಡುತಿದ್ದೇವೆ. ಒಂದು ಕೋಟಿ ಜನರು ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ. ಬಾಕಿ ಇರುವ ಹಣ ಒಂದು ವಾರದಲ್ಲಿ ಉಳಿದ ಫಲಾನುಭವಿಗಳ ಅಕೌಂಟ್​ಗೆ ನೀಡ್ತಿವಿ ಎಂದು ತಿಳಿಸಿದ್ದಾರೆ.

ಯಾರೇ ಬಂದ್ರೂ ಸ್ವಾಗತ

ಆಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಹಾಗೂ ಜೆಡಿಎಸ್ ತೊರೆದು ಬರುವವರ ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ಎಲ್ಲ ನಾನು ಮಾಧ್ಯಮದಲ್ಲೇ ನೋಡುತ್ತಿದ್ದೇನೆ. ಪಕ್ಷಕ್ಕೆ ಯಾರೇ ಬಂದರು ಹೈಕಮಾಂಡ್ ನಿರ್ಣಯ ಇದೆ. ಪಕ್ಷಕ್ಕೆ ಬರುವವರಿಗೆ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಮಾತು ಕೊಟ್ಟಂತೆ 5 ಗ್ಯಾರಂಟಿ ಜಾರಿ

ಲೊಕಸಭಾ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ತೀವಿ. ಮೊದಲ ಕ್ಯಾಬಿನೆಟ್​ನಲ್ಲಿ ನಿರ್ಣಯಿಸಿದಂತೆ 5 ಗ್ಯಾರಂಟಿಗಳ‌ನ್ನು ಜಾರಿ ಮಾಡಿದ್ದೇವೆ. ಯುವನಿಧಿ ಕಾರ್ಯಕ್ರಮ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ತರುತ್ತೇವೆ. ಮಾತು ಕೊಟ್ಟಂತೆ 5 ಗ್ಯಾರಂಟಿ ಜಾರಿ ಮಾಡ್ತೇವೆ ಎಂದು ಸಚಿವ ಮುನಿಯಪ್ಪ ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES