ಬಳ್ಳಾರಿ : ಜಿಲ್ಲೆಯ ಹಲಕುಂದಿಯ ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ಗುಂಪು ಇಬ್ಬರ ಮೆಲೆ ದಾಳಿ ನಡೆಸಿದ್ದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಹಲಕುಂದಿ ಗ್ರಾಮದ ನಿವಾಸಿ ಕೃಷ್ಣನಾಯಕ್ ಎಂಬುವವರ ಮೇಲೆ ಕರಡಿ ದಾಳಿ ನಡೆಸಿ ಕೈ ಗಾಯಗೊಳಿಸಿದೆ, ಮತ್ತೊಂದಡೆ ಗ್ರಾಮದ ಮಠದ ಬಳಿ ಪ್ರಸನ್ನ ಕುಮಾರ ಎಂಬುವವರ ಮೇಲೆ ಮೂರ್ನಾಲ್ಕು ಕರಡಿಗಳು ದಾಳಿ ಮಾಡಿದೆ.
ಇದನ್ನೂ ಓದಿ: ಕೆರೆಯಲ್ಲಿ ಮೋಟಾರ್ ಕದಿಯಲು ಯತ್ನ: ಗ್ರಾಮಸ್ಥರಿಂದ ಕಳ್ಳನಿಗೆ ಥಳಿತ!
ಗ್ರಾಮದ ಅಂಚಿನಲ್ಲಿರುವ ಅರಣ್ಯ ಪ್ರದೇಶದಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಕರಡಿಗಳು ದಾಳಿ ಮಾಡಿದೆ. ಕರಡಿ ದಾಳಿಯಿಂದ ಮುಖ ಸೇರಿದಂತೆ ದೇಹದ ನಾನಾ ಭಾಗಗಳಿಗೆ ಗಂಭೀರ ಗಾಯಗಳಾಗಿದೆ. ಕರಡಿ ದಾಳಿಯಿಂದ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆ ಮುಂದುವರೆಸಲಾಗಿದೆ.