Thursday, May 9, 2024

ಕೆರೆಯಲ್ಲಿ ಮೋಟಾರ್ ಕದಿಯಲು ಯತ್ನ: ಗ್ರಾಮಸ್ಥರಿಂದ ಕಳ್ಳನಿಗೆ ಥಳಿತ!

ವಿಜಯಪುರ : ಕೆರೆಯಲ್ಲಿನ ಮೋಟಾರ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಎಸ್​ ಎಚ್. ಗೋನಾಳ ಗ್ರಾಮದಲ್ಲಿ ನಡೆದಿದೆ.

ಗೋನಾಳ ಗ್ರಾಮಕ್ಕೆ ಬಂದ ಮೂವರು ಕಳ್ಳರ ಪೈಕಿ ಇಬ್ಬರು ಕೆರೆಯ ಪಕ್ಕದಲ್ಲೇ ಬೈಕ್​ ಮೇಲೆ ನಿಂತು ಕಾವಲು ಕಾಯುತ್ತಿದ್ದರೇ, ಓರ್ವ ಕೆರೆಗೆ ಇಳಿದು ಮೋಟಾರ್​ ಕಳಚುತ್ತಿದ್ದ. ವಿಚಾರ ತಿಳಿದು ಗ್ರಾಮಸ್ಥರು ಸ್ಥಳಕ್ಕಾಗಮಿಸುತ್ತಿದ್ದಂತೆ ಇಬ್ಬರು ಕಳ್ಳರು ಬೈಕ್ ನಲ್ಲಿ ಪರಾರಿಯಾಗಿದ್ದು ಓರ್ವ ಕಳ್ಳನನ್ನು ಹಿಡಿದ ಗ್ರಾಮಸ್ಥರು ಕಳ್ಳನ ಕೈ ಕಾಲುಗಳನ್ನು ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಇಂದು ಪ್ರಥಮ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ

ಈ ಹಿಂದೆ ಕೂಡಾ ಎಸ್ ಎಚ್ ಗೋನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ತೋಟದಲ್ಲಿರುವ ಮೋಟಾರ್ ಗಳನ್ನು ಈ ಕಳ್ಳರು ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ. ಈ ಘಟನೆಯು ತಾಳಿಕೋಟಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES