ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನನ್ನಿಂದ ಹಾಗೂ ಶಾಸಕ ಜನಾರ್ದನರೆಡ್ಡಿಯಿಂದ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಆನೆಗೊಂದಿ ಉತ್ಸವದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನನ್ನ ಪಾಲು ಇದೆ. ಜನಾರ್ಧನರೆಡ್ಡಿ ಅವರು ರಾಜಕಾರಣದಲ್ಲಿ ಬಹು ಬುದ್ಧಿವಂತರು. ಅವರಿಂದ ನಾವು ರಾಜಕಾರಣ ಮಾಡುವುದು ಕಲಿಯಬೇಕು. ಅವರು ಬಿಜೆಪಿಯಲ್ಲಿದ್ದಾಗ ನಮ್ಮನ್ನು ಕರೆದುಕೊಂಡು ಹೋದರು. ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಅವರು ಕಾರಣ, ಬುದ್ದಿವಂತಿಕೆ ರಾಜಕಾರಣ ಮಾಡಿದರು ಎಂದರು.
ಇದನ್ನೂ ಓದಿ: ದೇವಾಲಯದ ಆಡಳಿತ ಮಂಡಳಿ ಸದಸ್ಯರಿಂದ ಕಂತೆ ಕಂತೆ ಹುಂಡಿ ಹಣ ಕಳ್ಳತನ!
ಜನಾರ್ದನ ರೆಡ್ಡಿ ಬಲಿಷ್ಠ ಕಂಬದಂತೆ ನಿಂತಿದ್ದಕ್ಕೆ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ನಾನು ಶಾಸಕನಾಗಿದ್ದಾಗ ಅವರೇ ಕರೆದುಕೊಂಡು ಹೋಗಿ ಮಂತ್ರಿ ಮಾಡಿ ಸರ್ಕಾರ ಮಾಡಿಸಿದ್ದರು ಎಂದು ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿದ ವಿಚಾರ ಮೆಲುಕು ಹಾಕಿದ್ದಾರೆ.