ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಪ್ರಸಿದ್ದ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿದ್ದ ಕಂತೆ ಕಂತೆ ಹಣವನ್ನು ಹಾಡ ಹಗಲೇ ದೇವಾಲಯದ ಆಡಳಿತ ಮಂಡಳಿಯ ಸದಸ್ಯನೊಬ್ಬ ಎಗರಿಸಿರುವ ಘಟನೆ ನಡೆದಿದಿದ್ದು, ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಪತ್ತೆಯಗಿದೆ.
ಇದನ್ನೂ ಓದಿ: ಗೋಬಿ ಮಂಚೂರಿ ಬ್ಯಾನ್ಗೆ ಹೋಟೆಲ್ಗಳ ಸಂಘ ವಿರೋಧ!
ಹಣ ಎಗರಿಸಿದವರು ದೇವಾಲಯದ ಆಡಳಿತ ಮಂಡಳಿ ಸದಸ್ಯ ಗೋಪಿ ಎಂದು ತಿಳಿದು ಬಂದಿದೆ. ಮುಜರಾಯಿ ಇಲಾಖೆಗೆ ಸೇರಿರುವ ಗಾಳಿ ಆಂಜನೇಯ ದೇವಾಲಯದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಹನುಂತಪ್ಪ ಸಮ್ಮುಖದಲ್ಲಿ ಹುಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ, ಆಡಳಿತ ಮಂಡಳಿ ಸದಸ್ಯ ಗೋಪಿ ಎನ್ನುವವರು ಹುಂಡಿ ಹಣ ಎಣಿಕೆ ಮಾಡಿ ಇಟ್ಟಿದ್ದಿದ್ದ ಹಣವನ್ನು ಯಾರಿಗೂ ತಿಳಿಯದಂತೆ ಹೊಂಚುಹಾಕಿ ಕಂತೆ ಕಂತೆ ಹಣವನ್ನು ತನ್ನ ಜೇಬಿಗೆ ಇಳಿಸಿಕೊಂಡಿದ್ದಾನೆ, ಈ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ.
ಈ ಕೃತ್ಯಕ್ಕೆ ಮತ್ತೊಬ್ಬ ಸದಸ್ಯ ಮಂಜು ಎಂಬುವವರು ಈ ಕಳ್ಳತನಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆಯೂ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.