Tuesday, April 30, 2024

ಕಾಂಗ್ರೆಸ್ ಬ್ರೈನ್ ಡೆಡ್ ಆದ ಪಾರ್ಟಿ : ಶ್ರೀರಾಮುಲು

ಕೊಪ್ಪಳ : ಕಾಂಗ್ರೆಸ್ ಪಾರ್ಟಿ ಬ್ರೈನ್ ಡೆಡ್ ಆದ ಪಾರ್ಟಿ. ಅದನ್ನ ಮೇಲೆತ್ತಲು ಪ್ರಯತ್ನ ಮಾಡಿದ್ರೂ ಮೇಲೆ ಎತ್ತೋಕೆ ಆಗಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಸುಳ್ಳು ಆಶ್ವಾಸನೆ ಕೊಟ್ಟು, ಜನರಲ್ಲಿ ಭ್ರಮೆ ಬರುವಂತೆ ಮಾಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಲ್ಯಾಣ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯನ್ನ ಸ್ವಚ್ಚ ಮಾಡ್ತಿವಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರೇ ಇವತ್ತು ಸ್ವಚ್ಚವಾಗಿದ್ದಾರೆ. ಅವರಲ್ಲಿ ಸ್ಪರ್ಧೆ ಮಾಡೋಕೆ ನಾಯಕರೇ ಇಲ್ಲ. ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಯಾರೂ ಸ್ಪರ್ಧೆ ಮಾಡ್ತಿಲ್ಲ. ಜನರು ಈ ಬಾರಿ ಕಸಬರಗಿ ಹಿಡ್ಕೊಂಡು ಕಾಂಗ್ರೆಸ್ ಅನ್ನು ಜಾಡಿಸಿದ್ದಾರೆ ಎಂದು ಕುಟುಕಿದ್ದಾರೆ.

ಇವ್ರು ವಿರೋಧ ಪಕ್ಷದಲ್ಲೂ ಕೂರಲ್ಲ

ಈ ಬಾರಿ ಕಾಂಗ್ರೆಸ್​ನವರಿಗೆ ವಿರೋಧ ಪಕ್ಷದಲ್ಲಿ ಕೂರೋಕೆ ಆಗುತ್ತೋ ಇಲ್ಲೊ ಗೊತ್ತಿಲ್ಲ. ನಾವು ಶಾಸಕ ಜನಾರ್ದನರೆಡ್ಡಿ ಅವರು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು. ಪಕ್ಷ ನಮ್ಮಂತವರನ್ನ ಕಳೆದುಕೊಳ್ಳಬಾರದು ಎಂದು ನಮಗೆ ಪಕ್ಷ ಮತ್ತೆ ಅವಕಾಶ ನೀಡಿದೆ. ನಾವಿಬ್ಬರು ಜೊತೆಯಾಗಿರೋದು ಹೆಚ್ಚಿನ ಬಲ ಬಂದಂತಾಗುತ್ತೆ ಎಂದು ತಿಳಿಸಿದ್ದಾರೆ.

ಖಜಾನೆಯನ್ನ ಖಾಲಿ ಮಾಡಿದ್ದಾರೆ

ಆಶ್ವಾಸನೆ ಕೊಟ್ಟು ಕೆಲಸ ಮಾಡದೇ ಇರೋದು ಕಾಂಗ್ರೆಸ್ ಗ್ಯಾರಂಟಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಂದೇ ವರ್ಷದಲ್ಲಿ ವಿಫಲವಾಗಿದೆ. ಶಾಸಕರಿಗೆ ಅನುದಾನ ಕೊಡಲು ಇವರಿಗೆ ಆಗ್ತಿಲ್ಲ. ರಾಜ್ಯದ ಖಜಾನೆಯನ್ನ ಖಾಲಿ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಜನರೆ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES