Wednesday, May 22, 2024

ಸಿದ್ದರಾಮಯ್ಯ ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆ : ಬಿಜೆಪಿ

ಬೆಂಗಳೂರು : ಬಾಯಿ ಬಿಟ್ಟರೆ ಭಂಡಗೇಡು ಎಂದು ಗೊತ್ತಿದ್ದರೂ, ಸಿಎಂ ಸಿದ್ದರಾಮಯ್ಯನವರು ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಕುಟುಕಿದೆ.

ಬಿಜೆಪಿಯವರು ಕತ್ರಿ ಹಾಕುವುದರಲ್ಲಿ ನಿಸ್ಸೀಮರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಎಕ್ಸ್​ ಖಾತೆಯಲ್ಲಿ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

ಸಿದ್ದರಾಮಯ್ಯ ಅವರೇ, ರಾಜ್ಯದ ಒಬ್ಬೇ ಒಬ್ಬ ಫಲಾನುಭವಿ ಮನೆಗೆ 10 ಕೆ.ಜಿ. ಅಕ್ಕಿ ಹೋಗಿದೆ ಎಂದು ಸಾಬೀತುಪಡಿಸಿ. ನಿಮ್ಮ ಮಾನ ಉಳಿಸಿಕೊಳ್ಳಿ, ಇಲ್ಲವೇ ಕ್ಷಮೆ ಕೇಳಿ. 10 ಕೆ.ಜಿ. ಅಕ್ಕಿಯನ್ನು ಯಾರ ಮನೆಗೆ ಕೊಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದೆ.

ಈ ಸುದ್ದಿ ಓದಿದ್ದೀರಾ? : ಈ ಸರ್ಕಾರ ಕೊಡುವ ಗ್ಯಾರಂಟಿಗೆ ಮೋಸ ಹೋಗಬೇಡಿ : ಹೆಚ್.ಡಿ. ದೇವೇಗೌಡ

ಸುಳ್ಳು ಹೇಳುವುದರಲ್ಲಿ ನಿಸ್ಸಿಮರು

ಪ್ರಧಾನಿ ಮೋದಿ ಸರ್ಕಾರದ 5 ಕೆ.ಜಿ. ಅಕ್ಕಿಯಲ್ಲೇ 2 ಕೆ.ಜಿ. ಅಕ್ಕಿಯನ್ನು ಕದ್ದು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. 10 ಕೆ.ಜಿ. ಅಕ್ಕಿಯ ಆಸೆ ತೋರಿಸಿ 5 ಕೆ.ಜಿ. ಅಕ್ಕಿಯ ಹಣ ಹಾಕುತ್ತೇವೆಂದು ಜನರ ಕಿವಿ ಮೇಲೆ ಲಾಲ್‌ಬಾಗ್‌ ಅನ್ನೇ ಇಟ್ಟಿದ್ದೀರಿ. ಸಿದ್ದರಾಮಯ್ಯನವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ವಾಗ್ದಾಳಿ ನಡೆಸಿದೆ.

RELATED ARTICLES

Related Articles

TRENDING ARTICLES