Wednesday, May 22, 2024

ಈ ಸರ್ಕಾರ ಕೊಡುವ ಗ್ಯಾರಂಟಿಗೆ ಮೋಸ ಹೋಗಬೇಡಿ : ಹೆಚ್.ಡಿ. ದೇವೇಗೌಡ

ಮಂಡ್ಯ : ಕಾಂಗ್ರೆಸ್​ ಸರ್ಕಾರ ಕೊಡುವ ಉಚಿತ ಗ್ಯಾರಂಟಿಗೆ ಮೋಸ ಹೋಗಬೇಡಿ. ಪ್ರಧಾನಿ ಮೋದಿಯವರು ಬಹಳ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹೇಳಿದರು.

ಮಂಡ್ಯದ ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ನೀರಾವರಿ ಮಂತ್ರಿ ತುಂಬಾ ತಜ್ಞರು. ಬರೀ ನೀರಾವರಿ ಅಲ್ಲ, ಇಡೀ ಬೆಂಗಳೂರನ್ನೇ ಬಾಚಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು.

ದೇವೇಗೌಡ ರೈತನ ಮಗ. ನಮ್ಮಪ್ಪ ಗೌಡ ಅಂತ ಹೆಸರು ಇಟ್ಟಿದ್ದಾರೆ. ಬೇವರು ಸುರಿಸಿ ಉಳುಮೆ ಮಾಡಿ ದೇಶಕ್ಕೆ ಅನ್ನ ಕೊಡುವವನು ಗೌಡ. ಜಾತಿಯಿಂದ ಗೌಡ ಅಲ್ಲ. ಒಕ್ಕಲಿಗರು ಗೌಡ ಹೆಸರನ್ನ ಒಂದು ತಳಿಗೆ ಇಟ್ಟಿದ್ದಾರೆ. ಕಾವೇರಿ ಬೇಸ್​ನ ರೈತರಿಗೆ ಅನ್ಯಾಯ ಆಗಿದೆ. ನೋವು ಉಂಟುಮಾಡಿದ್ದಾರೆ. ಟ್ಯಾಂಕರ್ ಮೂಲಕ ಬೆಂಗಳೂರಲ್ಲಿ ನೀರು ಕೊಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಕಾವೇರಿ ಉಳಿಸುವುದು ಅಷ್ಟು ಸುಲಭವಲ್ಲ

ನಾನು ಎಷ್ಟು ದಿನ ಬದುಕಿರುತ್ತೇನೆ ಅಂತ ಗೊತ್ತಿಲ್ಲ. ಮೂರು ವರ್ಷ ಕಠಿಣ ಕಾಯಿಲೆ ಇತ್ತು. ನನ್ನ ಅಳಿಯ ಡಾ. ಮಂಜುನಾಥ್ ಕಾಪಾಡಿದ್ದಾರೆ. ಕಿಡ್ನಿ ಫೇಲ್, ಶುಗರ್, ಬಿಪಿ ಎಲ್ಲಾ ಇದೆ. ಆದ್ರೆ ನಾನು ಬದುಕಿರುವುದು ಹೆಚ್ಚು. ನಾಲ್ಕು ತಿಂಗಳಿಂದ ಹೋರಾಟ ಮಾಡ್ತಿದ್ದೇನೆ. ಶಕ್ತಿ ಮೀರಿ ನಾನು ಕಾವೇರಿಗಾಗಿ ಹೋರಾಟ ಮಾಡಿದ್ದೇನೆ. ಕಾವೇರಿ ಉಳಿಸುವುದು ಅಷ್ಟು ಸುಲಭವಲ್ಲ. ಸ್ಟ್ಯಾಲಿನ್ ಶಕ್ತಿಗೆ ನೀರು ಬಿಟ್ಟುರು ಬಿಟ್ಟರು. ಒಬ್ಬ ಮಂಡ್ಯ ಶಾಸಕ ಮಾತನಾಡಿಲ್ಲ ಎಂದು ಹೆಚ್.ಡಿ. ದೇವೇಗೌಡ ಬೇಸರ ಹೊರಹಾಕಿದರು.

RELATED ARTICLES

Related Articles

TRENDING ARTICLES