ಬೆಳಗಾವಿ : ಮಹಾಪ್ರಭು ಮೋದಿ ಫಕೀರರು! ನಾನು ಜಂಗಮ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ದೇಶ ಉಳಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಾಪ್ರಭುಗಳ ದಯೆಯಿಂದ ನಾವೆಲ್ಲರೂ ಸೇರಿದ್ದೇವೆ ಎಂದು ಪ್ರಧಾನಿ ಮೋದಿ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ್ದಾರೆ.
ಸ್ಥಾವರ ಕಳಿವೊಂದು ಜಂಗಮ ಅಳಿವಿಲ್ಲ, ಪ್ರತಿರೋಧಕ್ಕೆ ಅಳಿವಿಲ್ಲ ಪ್ರಜೆಗೆ ಅಳಿವಿಲ್ಲ. ಶ್ರೀ ಶ್ರೀ ಜಗದ್ಗುರು ಮಹಾಸುಳ್ಳುಗಾರ ಮಹಾಪ್ರಭುಗಳ ಹೊಸ ಸುಳ್ಳೊಂದು ಈಗಷ್ಟೇ ಸುದ್ದಿ ಬಂದಿದೆ. ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕೇಳಿ ನ್ಯಾಯಾಲಯಕ್ಕೂ ಇವತ್ತು ಹೋಗಿದ್ದಾರೆ. ಕೋರ್ಟ್ ನಲ್ಲಿ ಮಹಾಪ್ರಭುಗಳ ವಕೀಲರು ಮತ್ತೊಂದು ಸುಳ್ಳು ಹೇಳಿದ್ದಾರೆ ಎಂದು ಕುಟುಕಿದ್ದಾರೆ.
ಬರ ಪರಿಹಾರಕ್ಕಾಗಿ ನೀವು ಕೇಂದ್ರ ಸರ್ಕಾರ ಕೇಳಬೇಕಿತ್ತು. ಆದರೆ, ನೇರವಾಗಿ ಸುಪ್ರೀಂ ಕೋರ್ಟ್ಗೆ ಬಂದಿದ್ದಾರೆ. ನಾವು ಕೊಡೋಕೆ ಆಗಲ್ಲ. ಸುಪ್ರೀಂಕೋರ್ಟ್ನವರು ದಯವಿಟ್ಟು ನಮಗೆ ನೋಟಿಸ್ ಕಳುಹಿಸಬೇಡಿ. ನೋಟಿಸ್ ಕಳುಹಿಸಿದ್ರೆ ಕರ್ನಾಟಕ ಸರ್ಕಾರದ ಚುನಾವಣೆಗೆ ಸಹಕಾರಿ ಆಗುತ್ತೆ ಅಂತ ಹೇಳಿದ್ದಾರೆ ಇವ್ರು ಎಂದು ಚಾಟಿ ಬೀಸಿದ್ದಾರೆ.
ನಾಚಿಕೆ, ಮಾನ ಮಾರ್ಯಾದೆ ಇದೆಯೋ?
ಒಂದು ರಾಜ್ಯ ಅಕ್ಟೋಬರ್ 31ರಲ್ಲಿ ಬರ ಘೋಷಿಸಿ ಪರಿಹಾರ ಕೇಳುತ್ತೆ . ನಂತರವೂ ನವೆಂಬರ್ ಡಿಸೆಂಬರ್ನಲ್ಲಿ ಚಾಣಕ್ಯರನ್ನ ಮಾಹಾಪ್ರಭುಗಳನ್ನ ಭೇಟಿ ಮಾಡಿ ಹರಕೆ ಮಾಡಿ ವಿಳಂಬ ಮಾಡ್ತಿದ್ದಾರೆ. ಇಲ್ಲಿಂದ ಹೋದ ಯಾವ ಸಂಸದರು ಬಾಯಿಬಿಟ್ಟಿಲ್ಲ. ಈಗ ಚುನಾವಣೆ ಬಂದಿದೆ, ಕೋರ್ಟ್ ಹತ್ತಿರ ಹೋದ್ರೆ ಇನ್ನೊಂದು ಸುಳ್ಳು ಹೇಳ್ತಿದ್ದಾರೆ. ನಾಚಿಕೆ, ಮಾನ ಮಾರ್ಯಾದೆ ಏನಾದರೂ ಇದೆಯೋ ಇವರಿಗೆ ಎಂದು ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.