Saturday, May 4, 2024

ಎಸ್​.ಆರ್​ ವಿಶ್ವನಾಥ್​ ಭೇಟಿಗೆ ಬಂದ ಸುಧಾಕರ್ ಗೆ ಬಾರಿ ಮುಜುಗರ

ಬೆಂಗಳೂರು : ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್​ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್​ಗೆ ಭಾರಿ ನಿರಾಸೆಯಾಗಿದ್ದು ಬಂದ ದಾರಿಯಲ್ಲೇ ವಾಪಾಸ್ ತೆರಳಿರುವ ಘಟನೆ ನಡೆದಿದೆ.

ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ಶಾಸಕ ಎಸ್​ ಆರ್​ ವಿಶ್ವನಾಥ್​ ನಿವಾಸಕ್ಕೆ ಇಂದು ಬೆಳಗ್ಗೆ 9.30 ರ ಸುಮಾರಿಗೆ ಮಾಜಿ ಸಚಿವ ಡಾ.ಕೆ ಸುಧಾಕರ್ ಆಗಮಿಸಿದ್ದರು. ಆದರೇ, ಈ ವೇಳೆ ಶಾಸಕರು ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ. ಬೆಂಗಳೂರಿನ ತಮ್ಮ ಆಪ್ತರ ಮನೆಯ ಗೃಹಪ್ರವೇಶಕ್ಕೆ ಶಾಸಕ ವಿಶ್ವನಾಥ್ ಕುಟುಂಬ ಸಮೇತರಾಗಿ ತೆರಳಿದ್ದ ಹಿನ್ನೆಲೆ ಸುಧಾಕರ್ ಬರಿಗೈನಿಂದ ವಾಪಾಸ್ಸಾಗಿದ್ದಾರೆ.

ಇನ್ನು ವಿಶ್ವನಾಥ್​ ಅವರ ನಿವಾಸದ ಬಳಿ ಈ ಕುರಿತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು​, ನನಗಾಗಲಿ ವಿಶ್ವನಾಥ್​ ಅವರಿಗಾಗಲಿ ವೈಯಕ್ತಿಕವಾಗಿ ಯಾವುದೇ ಕಲಹಗಳಿಲ್ಲ, ಬಿಜೆಪಿ ಹೈಕಮಾಂಡ್​ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್​ ನನಗೆ ಕೊಟ್ಟಿದ್ದರಿಂದ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟು ಬಿಟ್ಟರೇ ಬೇರೆ ಏನು ಇಲ್ಲ ಎಂದರು.

ಇದನ್ನೂ ಓದಿ: T20 Cricket World Cup: ಏಪ್ರಿಲ್​ ಕೊನೆಯ ವಾರ ಟೀಂ ಇಂಡಿಯಾ ತಂಡ ಪ್ರಕಟ

ಏಳು ಕ್ಷೇತ್ರಗಳಲ್ಲಿ ಪ್ರಚಾರ ಸಭೇ ಆರಂಭವಾಗಿದೆ ಯಲಹಂಕದಲ್ಲಿ ಇನ್ನೂ ಆರಂಭವಾಗಿರಲಿಲ್ಲ ಹಲವು ಬಾರಿ ಅವರನ್ನು ಫೋನ್​ ಕಾಲ್ ಮತ್ತು ಮೆಸೆಜ್​ ಮೂಲಕ ಭೇಟಿ ಮಾಡಲು ಪ್ರಯತ್ನಿಸಿದ್ದೆ ಆದರೇ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ಆದ್ದರಿಂದ ಇಂದು ಅವರು ಮನೆಯಲ್ಲಿರಬಹುದು ಎಂದು ಅವರ ನಿವಾಸಕ್ಕೆ ಬಂದಿದ್ದೆ ಆದರೇ, ಅವರ ಮನೆಯ ಸೆಕ್ಯೂರಿಟಿ ಅವರು ಮನೆಯಲಿಲ್ಲ ಕಾರ್ಯಕ್ರಮದ ನಿಮಿತ್ತ ಬೇರೆಡೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಟಿಕೆಟ್​ ಸಿಗದಕ್ಕೆ ಸಹಜವಾಗಿಯೇ ಬೇಸರದಿಂದ ಇದ್ದಾರೆ. ಇನ್ನು ಒಂದೆರಡು ಬಾರಿ ಭೇಟಿಯಾಗುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಇನ್ನು ಈ ಬೇಸರ ಹೋಗಲಾಡಿಸುವಲ್ಲಿ ವಿಶ್ವನಾಥ್ ಅವರೊಂದಿಗೆ ನಮ್ಮ ಪಕ್ಷದ ವರಿಷ್ಟರು ಪ್ರಯತ್ನಿಸುತ್ತಾರೆ, ಎಲ್ಲವೂ ಸರಿಹೋಗುತ್ತದೆ ಎಂದು ಅಭಿಪ್ರಾಯ ಪಟ್ಟರು.

RELATED ARTICLES

Related Articles

TRENDING ARTICLES