ಬೆಂಗಳೂರು : ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ಗೆ ಭಾರಿ ನಿರಾಸೆಯಾಗಿದ್ದು ಬಂದ ದಾರಿಯಲ್ಲೇ ವಾಪಾಸ್ ತೆರಳಿರುವ ಘಟನೆ ನಡೆದಿದೆ.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ಶಾಸಕ ಎಸ್ ಆರ್ ವಿಶ್ವನಾಥ್ ನಿವಾಸಕ್ಕೆ ಇಂದು ಬೆಳಗ್ಗೆ 9.30 ರ ಸುಮಾರಿಗೆ ಮಾಜಿ ಸಚಿವ ಡಾ.ಕೆ ಸುಧಾಕರ್ ಆಗಮಿಸಿದ್ದರು. ಆದರೇ, ಈ ವೇಳೆ ಶಾಸಕರು ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ. ಬೆಂಗಳೂರಿನ ತಮ್ಮ ಆಪ್ತರ ಮನೆಯ ಗೃಹಪ್ರವೇಶಕ್ಕೆ ಶಾಸಕ ವಿಶ್ವನಾಥ್ ಕುಟುಂಬ ಸಮೇತರಾಗಿ ತೆರಳಿದ್ದ ಹಿನ್ನೆಲೆ ಸುಧಾಕರ್ ಬರಿಗೈನಿಂದ ವಾಪಾಸ್ಸಾಗಿದ್ದಾರೆ.
ಇನ್ನು ವಿಶ್ವನಾಥ್ ಅವರ ನಿವಾಸದ ಬಳಿ ಈ ಕುರಿತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ನನಗಾಗಲಿ ವಿಶ್ವನಾಥ್ ಅವರಿಗಾಗಲಿ ವೈಯಕ್ತಿಕವಾಗಿ ಯಾವುದೇ ಕಲಹಗಳಿಲ್ಲ, ಬಿಜೆಪಿ ಹೈಕಮಾಂಡ್ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ಕೊಟ್ಟಿದ್ದರಿಂದ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟು ಬಿಟ್ಟರೇ ಬೇರೆ ಏನು ಇಲ್ಲ ಎಂದರು.
ಇದನ್ನೂ ಓದಿ: T20 Cricket World Cup: ಏಪ್ರಿಲ್ ಕೊನೆಯ ವಾರ ಟೀಂ ಇಂಡಿಯಾ ತಂಡ ಪ್ರಕಟ
ಏಳು ಕ್ಷೇತ್ರಗಳಲ್ಲಿ ಪ್ರಚಾರ ಸಭೇ ಆರಂಭವಾಗಿದೆ ಯಲಹಂಕದಲ್ಲಿ ಇನ್ನೂ ಆರಂಭವಾಗಿರಲಿಲ್ಲ ಹಲವು ಬಾರಿ ಅವರನ್ನು ಫೋನ್ ಕಾಲ್ ಮತ್ತು ಮೆಸೆಜ್ ಮೂಲಕ ಭೇಟಿ ಮಾಡಲು ಪ್ರಯತ್ನಿಸಿದ್ದೆ ಆದರೇ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ಆದ್ದರಿಂದ ಇಂದು ಅವರು ಮನೆಯಲ್ಲಿರಬಹುದು ಎಂದು ಅವರ ನಿವಾಸಕ್ಕೆ ಬಂದಿದ್ದೆ ಆದರೇ, ಅವರ ಮನೆಯ ಸೆಕ್ಯೂರಿಟಿ ಅವರು ಮನೆಯಲಿಲ್ಲ ಕಾರ್ಯಕ್ರಮದ ನಿಮಿತ್ತ ಬೇರೆಡೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಟಿಕೆಟ್ ಸಿಗದಕ್ಕೆ ಸಹಜವಾಗಿಯೇ ಬೇಸರದಿಂದ ಇದ್ದಾರೆ. ಇನ್ನು ಒಂದೆರಡು ಬಾರಿ ಭೇಟಿಯಾಗುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇನ್ನು ಈ ಬೇಸರ ಹೋಗಲಾಡಿಸುವಲ್ಲಿ ವಿಶ್ವನಾಥ್ ಅವರೊಂದಿಗೆ ನಮ್ಮ ಪಕ್ಷದ ವರಿಷ್ಟರು ಪ್ರಯತ್ನಿಸುತ್ತಾರೆ, ಎಲ್ಲವೂ ಸರಿಹೋಗುತ್ತದೆ ಎಂದು ಅಭಿಪ್ರಾಯ ಪಟ್ಟರು.