ಹಾಸನ: ಮಹಾಕಾಮಿ ಪ್ರಜ್ವಲ್ ರೇವಣ್ಣ ಕಾಮಲೀಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅತ್ಯಾಚಾರ ಕೇಸ್ನಲ್ಲಿ ಮತ್ತೊಂದು ಮಹತ್ತರ ಬೆಳವಣಿಗೆ ಕಂಡುಬಂದಿದೆ. SIT ಪೊಲೀಸರಿಂದ ಭವಾನಿ ರೇವಣ್ಣ ಅಕ್ಕನ ಮಗ ಶರತ್ನನ್ನ ಬಂಧನ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದಲ್ಲಿ ಶರತ್ ನನ್ನು ಬಂಧನ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದ್ದು, ನೂರೆಂಟು ಪ್ರಶ್ನೆಗಳು ಮೂಡಿದೆ. ಅತ್ಯಾಚಾರ ಘಟನೆಗೂ, ಬಂಧಿತ ಶರತ್ಗೂ ಇರುವ ನಂಟೇನು?. ಹಾಗೂ ಸಂತ್ರಸ್ತೆಯೊಬ್ಬರ ಕಿಡ್ನ್ಯಾಪ್ ಕೇಸ್ನಲ್ಲಿ ಶರತ್ ಬಂಧನವಾಯ್ತಾ ಎಂಬ ಪ್ರಶ್ನೆ ಕಾಡಿದೆ. ಅಲ್ಲದೇ ಸಾಕ್ಷ್ಯ ನಾಶಕ್ಕೆ ಭವಾನಿ ರೇವಣ್ಣ ಅಕ್ಕನ ಮಗ ಮುಂದಾಗಿದ್ದನಾ ಎಂದು ಅನುಮಾನ ಮೂಡಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ರೇವಣ್ಣ ನಿವಾಸದಲ್ಲಿ SITಯಿಂದ ಸಂತ್ರಸ್ತೆಯೊಂದಿಗೆ ಸ್ಥಳ ಮಹಜರು
700 ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ:
ಪ್ರಜ್ವಲ್ ರೇವಣ್ಣ ಕಾಮಕೇಳಿ ವಿರುದ್ಧ ಮಹಿಳೆಯರು ಸಿಡಿದೆದಿದ್ದಾರೆ. ಈವರೆಗೆ ಮಹಿಳಾ ಸಂಘಟನೆಗಳೂ ಸೇರಿದಂತೆ 700 ಕ್ಕೂ ಹೆಚ್ಚು ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ವಿವಿಧ ಮಹಿಳಾ ಒಕ್ಕೂಟಗಳು ಮತ್ತು ಸಂಘಟನೆಗಳ ಮಹಿಳೆಯರು ಪತ್ರ ಬರೆದಿದ್ದಾರೆ. ಹೆಚ್.ಡಿ.ರೇವಣ್ಣನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಪತ್ರದಲ್ಲಿ ಮನವಿ ಮಾಡಿದ್ದಾರೆ. ಸಂತ್ರಸ್ತೆಯರಿಗೆ ಸೂಕ್ತ ಭದ್ರತೆ ಒದಗಿಸುವಂತೆಯೂ ಮನವಿ ಮಾಡಿ, ಪ್ರಜ್ವಲ್ ಹಾಗೂ ಹೆಚ್.ಡಿ.ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.