ಮಂಡ್ಯ: ರಾಜ್ಯದಲ್ಲಿರುವ ಒಕ್ಕಲಿಗರಷ್ಟೆ ಅಲ್ಲಾ, ದೇಶದ, ವಿದೇಶದಲ್ಲಿರುವ ಒಕ್ಕಲಿಗರೂ ಸಹ ತಲೆತಗ್ಗಿಸುವಂತೆ ಕೆಲಸವನ್ನು ರೇವಣ್ಣ ಮತ್ತು ಪ್ರಜ್ವಲ್ ಮಾಡಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಕಿಡಿಕಾರಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂವತ್ತು ವರ್ಷಗಳ ಹಿಂದೆ ತಾವು ಮತ್ತು ಹೆಚ್.ಡಿ.ರೇವಣ್ಣ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ, ಅಲ್ಲೂ ಕೂಡ ರೇವಣ್ಣ ಇದೇ ರೀತಿ ಮಾಡಿದ್ದರು. ಹಾಗಾಗಿ ಹೆಚ್.ಡಿ.ರೇವಣ್ಣ ಮತ್ತು ಅವರ ಕುಟುಂಬದವರಿಗೆ ಈ ರೀತಿ ಮಾಡುವುದು ಹೊಸದೇನಲ್ಲ,. ಈಗಲೂ ಎಸ್ ಐಟಿ ತಂಡದವರು ಇಂಗ್ಲೆಂಡ್ ಗೆ ಹೋಗಿ ತನಿಖೆ ಮಾಡಿದ್ರೆ ಆ ಪ್ರಕರಣವೂ ಹೊರಗೆ ಬರುತ್ತದೆ ಎಂದು ಶಿವರಾಮೇಗೌಡ ಹೇಳಿದರು.
ಇದನ್ನೂ ಓದಿ: ಜೆಡಿಎಸ್ ನಾಯಕಿ ಮೇಲೆಯೇ ಅತ್ಯಾಚಾರ! : ಕಾಮುಕ ‘ಪ್ರಜ್ವಲ್’ನ ಮತ್ತೊಂದು ಕರಾಳ ಕಹಾನಿ ಬಹಿರಂಗ
ಅವರು ಮಾಡಿದ ಪಾಪ ಅವರೇ ಅನುಭವಿಸುತ್ತಿದ್ದಾರೆ:
ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರೂ ಸಹ ಒಕ್ಕಲಿಗರು ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರನ್ನೂ ತಕ್ಷಣ ಬಂಧಿಸಬೇಕು ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಜೆಡಿಎಸ್ ನಲ್ಲಿ ಒಕ್ಕಲಿಗರನ್ನು ತುಳಿದರು, ನಮ್ಮಂತರವರನ್ನು ತುಳಿದ ಪಾಪವೇ ಈಗ ದೇವೇಗೌಡರನ್ನು ಕಾಡುತ್ತಿದೆ. ಇಳಿವಯಸ್ಸಿನಲ್ಲಿ ದೇವೇಗೌಡರು ಚಿಂತೆ ಮಾಡುವಂತೆ ಆಗಿದೆ. ಅದರ ಬಗ್ಗೆ ನಿಜವಾಗಲೂ ಬೇಸರವಾಗುತ್ತದೆ. ಆದರೂ ಅವರ ಮಾಡಿದ ಪಾಪ ಅವರನ್ನು ಕಾಡುತ್ತಿದೆ ಎಂದು ಶಿವರಾಮೇಗೌಡ ಹೇಳಿದ್ರು. ಇದೇ ವೇಳೆ, ಈ ಪ್ರಕರಣ ಆಗಲಿ ಅಂತಲೇ ಕುಮಾರಸ್ವಾಮಿ ಸಹ ಇಷ್ಟು ದಿನ ಸುಮ್ಮನಿದ್ದರು ಎಂದೂ ಸಹ ಶಿವರಾಮೇಗೌಡ ಆರೋಪಿಸಿದ್ದಾರೆ.
ಪವರ್ ಟಿವಿ ಸುದ್ದಿ ಪ್ರಸಾರ ಪ್ರಸ್ತಾಪ:
ಪ್ರಜ್ವಲ್ ರೇವಣ್ಣ ಕಾಮಪುರಾಣದ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಎಲ್.ಆರ್ ಶಿರಾಮೇಗೌಡ ಅವರು, ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಕುರಿತು ಯಾವ ಮಾದ್ಯಮಗಳು ಬಾಯಿ ಬಿಟ್ಟಿರಲಿಲ್ಲ, ಪವರ್ ಟಿವಿ ಬಂದಮೇಲೆ, ಅದುವರೆಗೂ ಒಂದು ಟಿವಿಯವರು ಬಾಯಿ ಬಿಟ್ಟಿರಲಿಲ್ಲ ಎಂದು ಪವರ್ ಟಿವಿ ಕುರಿತು ಪ್ರತಿಕ್ರಿಯೆ ನೀಡಿದರು.