Saturday, April 27, 2024

ನನಗೆ ಪಕ್ಷದ ವರಿಷ್ಠರಿಗಿಂತ ಬೆಂಬಲ ಕೊಟ್ಟ ಕ್ಷೇತ್ರದ ಜನತೆ ಮುಖ್ಯ: ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ: ನನಗೆ ಪಕ್ಷದ ವರಿಷ್ಠರಿಗಿಂತ ಬೆಂಬಲ ಕೊಟ್ಟ ಕ್ಷೇತ್ರದ ಜನತೆ ಮುಖ್ಯ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದ್ದಾರೆ.

ಸ್ವಾಭಿಮಾನಿ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎಪ್ರೀಲ್ 3ನೇ ತಾರೀಕು ರಘುಚಂದನ್ ನಾಮಿನೇಶನ್ ಮಾಡೇ ಮಾಡ್ತೀವಿ.ನನಗೆ ಪಕ್ಷ ಅಥವಾ ಅವರ ನಿರ್ಧಾರ ಕ್ಕಿಂತ ಕ್ಷೇತ್ರದ ಜನತೆ ಮುಖ್ಯ ಎಂದರು.

ನಮ್ಮ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ನಡೆ ತಿಳಿಸ್ತೀನಿ.ಬಾಧಕ ಯೋಚನೆ ಮಾಡಿ ತಕ್ಷಣ ನಿರ್ಧಾರ ತಿಳಸ್ತೀನಿ. ನಾವು ಎಪ್ರೀಲ್ 3 ರಂದು ನಾಮಪತ್ರ ಸಲ್ಲಿಸೋಕೆ ನಿರ್ಧಾರ ಮಾಡಿದೀವಿ.ಇನ್ನೂ ಕಾಲ ಮಿಂಚಿಲ್ಲ, ಪಕ್ಷದಿಂದ ಟಿಕೆಟ್ ಕೇಳ್ತಿದೀವಿ.ಪಕ್ಷ ಕೊಡತ್ತೋ ಬಿಡತ್ತೋ ಅದು ಅವರ ನಿರ್ಧಾರ ನಾವು ನಾಮಿನೇಶನ್ ಮಾಡೋ ನಿರ್ಧಾರ ಮಾಡಿದೀವಿ, ಪಕ್ಕಾ ಮಾಡ್ತೀವಿ ನಮ್ಮ ನೋವೇನು ಅಂತಾ ಅವರಿಗೆ ಅರ್ಥ ಆಗುತ್ತೆ ಅಂದುಕೊಂಡಿದ್ದೀನಿ ಎಂದರು.

ಬೇರೆ ಎಲ್ಲಿಂದಲೋ ಬಂದಬಗ್ಗೆ ನಾನು ಮಾತಾಡಲ್ಲ ನೀವು ಇಲ್ಲಿಗೆ ಬಂದದ್ದು ಸರಿನಾ ಅಂತಾ ಕೇಳ್ತಿದೀನಿ ಪಾರ್ಟಿ ನನ್ನ ಮೇಲೆ ಏನೇ ಕ್ರಮ ತಗೊಂಡ್ರೂ ಓಕೆ ನಾಮಿನೇಶನ್ ಪಕ್ಕಾ ನನ್ನ‌ ಮೇಲೆ‌ ಏನೇ ಕ್ರಮ ಕೈಗೊಂಡ್ರೂ ನಾನು ಅದಕ್ಕೆ ಮೊದಲೇ ಸಿದ್ಧಪಕ್ಷದವರು ಏನೇ ತೀರ್ಮಾನ ಮಾಡಿದ್ರೂ ನಾನು ಮೊದಲೇ ಅದಕ್ಕೆ ಸಿದ್ಧನನಗೆ ಜನ ಮುಖ್ಯ, ಪಕ್ಷ ಅವರ ತೀರ್ಮಾನ ಅಲ್ಲಾ ಎಂದರು.

ಸಿದ್ಧನಿಲ್ಲದಿದ್ರೆ ಇಷ್ಟೆಲ್ಲಾ ಮಾಡ್ತಿದ್ನಾ…?

ಯಾರಿಗೂ ಕಾಯಲ್ಲ 3ನೇ ತಾರೀಕು ನಾಮಿನೇಶನ್ ಮಾಡ್ತೀನಿ.ಆಂತರಿಕವಾಗಿ ಮುಖಂಡರೊಂದಿಗೆ ಮಾತನಾಡಿ ನಿರ್ಧಾರ ಮಾಡ್ತೀನಿ  ಎಂದರು.

 

RELATED ARTICLES

Related Articles

TRENDING ARTICLES