ಶಿವಮೊಗ್ಗ : ಪತ್ನಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವಕುಮಾರ್ ಪರ ಶಿವರಾಜ್ಕುಮಾರ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳ ಮತ್ತೆ ಸಿನಿಮಾ ಡೈಲಾಗ್ ಹೊಡೆದಿದ್ದಾರೆ.
ಶಿವಮೊಗ್ಗದ ಹಾರನಹಳ್ಳಿ ಗ್ರಾಮದ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಸಿಂಹದ ಮರಿ ನಾನು, ನಾನು ಯಾರಿಗೂ ಹೆದರುವುದಿಲ್ಲ. ನಾನು ಹೆದರುವುದು ಅಪ್ಪ, ಅಮ್ಮ, ನಿಮ್ಗೆ ಅಷ್ಟೇ. ನಾನು ಎಂದೂ ನಿಮ್ಮವನು, ನಿಮ್ಮಗಾಗಿ ಬಂದವನು. ಆ ಸಿಂಹದ ಮರಿ ನಾನು ಎಂದು ಹಾಡು ಹೇಳಿದ್ದಾರೆ. ಅಲ್ಲದೆ, ಹೇ ಡಾಲಿ ಸುಮ್ಮನೆ ಬಂದ್ರೆ ಅತಿಥಿ, ಹುಡುಕಿಕೊಂಡು ಬಂದ್ರೆ ನಿಮ್ಮ ತಿಥಿ ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ.
ತುಂಬಾ ಖುಷಿ ಆಗುತ್ತೆ, ಇಂದು ಪೈಲ್ವಾನ್ ತರಾ ಕಾಣಿಸುತ್ತಿದ್ದೀರಿ. ನಮ್ಮ ಪ್ರಚಾರ ಇಲ್ಲಿಂದ ಪ್ರಾರಂಭ ಆಗಿದ್ದು ಪಾಸಿಟಿವ್ ವೈಬ್ ಸಿಕ್ತು. ಬದಲಾವಣೆ ಬಯಸಿದ್ದೀರಾ ಎನ್ನುವ ಭಾವನೆ ಮೂಡಿದೆ. ಗೀತಾನ ಗಂಡನಾಗಿ ಬಂದಿದ್ದೇನೆ ಅಷ್ಟೇ. ನನಗೆ ರಾಜಕೀಯ ಬೇಡ ಅಂತ ಹೇಳಿದ್ದೆ. ಗೀತಾ ರಕ್ತದಲ್ಲಿ ರಾಜಕೀಯ ಇದೆ. ರಾಜಕೀಯದಲ್ಲಿ ಸೇವೆ ಮಾಡಲು ಗೀತಾ ಶಕ್ತಿ ಇದೆ. ಅವಕಾಶ ಕೊಟ್ಟಾಗ ತಾನೇ ಏನು ಮಾಡ್ತೀವಿ ಅಂತಾ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ನನ್ನ ಹೆಂಡ್ತಿಗೆ ಒಂದು ಅವಕಾಶ ಕೊಡಿ
ಭಾರತ ಎಲ್ಲರದು ಆಗಿದೆ. ನನ್ನದು ಅಂತ ಹೇಳೋಕೆ ಆಗೋಲ್ಲ. ಜನರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು, ಆಗ ಮನುಷ್ಯ ಅಎನಿಸುವುದು. ನಾನು ಭ್ರಮೆಯಲ್ಲಿ ಬದುಕೋನು ಅಲ್ಲ. ನಾನು ಬಂದ್ರೆ ಗೆಲ್ತೀವಿ ಅಂದುಕೊಂಡಿಲ್ಲ. ನೀವು ಸಿನಿಮಾ ನೋಡಿದ್ರೆ, ನಾನು ಸೂಪರ್ ಸ್ಟಾರ್ ಆಗೋದು. ನೀವು ನೋಡಿದ್ದಕ್ಕೆ ಪುನೀತ್ ಪವರ್ ಸ್ಟಾರ್ ಆದ್ರು. ಗೀತಾ ತಾಯಿ, ತಂಗಿ, ಅಕ್ಕ ಅಂದುಕೊಂಡು ಅವಕಾಶ ಕೊಡಿ. ಭರವಸೆ ಬೇಕು ಅಷ್ಟೇ, ಇದ್ರಿಂದ ನನಗೆ ಉಪಯೋಗ ಇಲ್ಲ. ಆದರೆ, ಒಂದು ಸೇವೆ ಮಾಡಬೇಕು ಅಂತ ಗೀತಾ ಬಂದಿದ್ದಾಳೆ. ನನ್ನ ಹೆಂಡ್ತಿಗೆ ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.