ಶಿವಮೊಗ್ಗ : ನನ್ನ ಪತ್ನಿ ಗೀತಾ ಸರಿಯಾಗಿ ಕೆಲಸ ಮಾಡದಿದ್ದರೆ ನನ್ನ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇನೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
ಹೊಳೆಹೊನ್ನೂರಿನಲ್ಲಿ ಪತ್ನಿ ಪರ ಪ್ರಚಾರ ನಡೆಸಿದ ಅವರು, ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಶಿವಣ್ಣ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದೆ ಕ್ಷಮಿಸಿ ಎಂದರೆ, ಈ ವೇಳೆ ಇರಲಿ ಬಿಡಣ್ಣ ನಿಮಗಾಗಿ ಜೀವ ಕೊಡ್ತಿವಿ ಎಂದು ಅಭಿಮಾನಿ ತಿಳಿಸಿದ್ದಾರೆ.
ಅಭಿಮಾನಿಗೆ ಕಿವಿಮಾತು ಹೇಳಿದ ಶಿವಣ್ಣ ಅವರು, ನನಗಾಗಿ ಜೀವ ಕೊಡಬೇಡಿ. ನಿಮ್ಮ ಕುಟುಂಬಕ್ಕಾಗಿ ಜೀವಿಸಬೇಕು. ನಿಮ್ಮ ಮನೆಯಲ್ಲಿ ಅಮ್ಮ, ಅಕ್ಕ, ತಂಗಿ, ಕುಟುಂಬ ಇರುತ್ತೆ. ಪ್ರೀತಿ ಕೊಡಬೇಕು ಅಷ್ಟೇ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ನಾನು ಹೆಸರು ಬದಲಿಸಿಕೊಳ್ಳುತ್ತೇನೆ
ಗೀತಾ ನಿಮ್ಮ ಊರ ಮಗಳು. ಗೆಲ್ಲಿಸಬೇಕಾದ ಜವಾಬ್ದಾರಿ ನಿಮ್ಮದು. ಸರಿಯಾದ ಅಭ್ಯರ್ಥಿಯನ್ನ ಆಯ್ಕೆ ಮಾಡಿಲ್ಲ ಅಂತ ನಿಮಗೆ ಅನಿಸಿದರೇ, ನಾನು ಹೆಸರು ಬದಲಿಸಿಕೊಳ್ಳುತ್ತೇನೆ. ನನ್ನ ಹೆಸರು ಶಿವಣ್ಣ ಅನ್ನೋದನ್ನೇ ಬದಲಾಯಿಸಿಕೊಳ್ಳುತ್ತೇನೆ. ಪವರ್ ಬರೋಕೆ ನಿಮ್ಮ ಸಹಕಾರ ಬೇಕು ಎಂದು ತಿಳಿಸಿದ್ದಾರೆ.
ಚುನಾವಣೆಗೆ ನಿಂತು ಸೋತಿದ್ದೇನೆ
ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಇಷ್ಟು ಜನರ ಪ್ರೀತಿ ವಿಶ್ವಾಸ ನೋಡಿ ಸಂತೋಷ ಆಗಿದೆ. ಚುನಾವಣೆಗೆ ನಿಂತು ಸೋತಿದ್ದೇನೆ, ಅದರಿಂದ ಬೇಜಾರು ಇಲ್ಲ. ಈ ಬಾರಿ ಗೆಲ್ಲಿಸುತ್ತೀರಿ ಎಂದು ನಂಬಿದ್ದೇನೆ. ತಂದೆಯವರು ಅನೇಕ ಜನಪರ ಯೋಜನೆ ಕೊಟ್ಟಿದ್ದಾರೆ. ಜನರ ಸೇವೆ ಮಾಡುವ ಆಸೆ ಇದೆ. ನಿಮ್ಮ ಧ್ವನಿ ಆಗುತ್ತೇನೆ, ಒಮ್ಮೆ ಗೆಲ್ಲಿಸಿ ಆಶೀವದಿಸಿ ಎಂದು ಮನವಿ ಮಾಡಿದ್ದಾರೆ.