Sunday, May 19, 2024

ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲು ಸೇರೋದು ಪಕ್ಕಾ!

ಬೆಂಗಳೂರು : ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲು ಸೇರುವುದು ಖಚಿತವಾಗಿದೆ.

ಎಸ್ಐಟಿ ಅಧಿಕಾರಿಗಳು ಈಗಾಗಲೇ ರೇವಣ್ಣ ಅವರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಈಗಾಗಲೇ ಮೆಡಿಕಲ್ ಟೆಸ್ಟ್ ಕೂಡ ಮುಗಿದಿದೆ.

ಇದೀಗ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಈ ವೇಳೆ ನ್ಯಾಯಾಧೀಶರು ಎಸ್​ಐಟಿ ವಶಕ್ಕೆ ನೀಡದೆ ಜೆಸಿಗೆ ನೀಡೋದು ಬಹುತೇಕ ಫಿಕ್ಸ್ ಆಗಿದೆ. ಇಂದು ರಜೆ‌ದಿನವಾದ್ದರಿಂದ ಯಾವುದೇ ಅರೋಪಿಯನ್ನ ಪಿಸಿ ಕಸ್ಟಡಿಗೆ ನೀಡುವುದಿಲ್ಲ. ಕಾನೂನಿನ‌ ನಿಯಮದ ಪ್ರಕಾರ ಜೆಸಿಗೆ ನ್ಯಾಯಾಲಯ ನೀಡುತ್ತದೆ.

ಇನ್ನು ಕೆಲವೇ ಕ್ಷಣದಲ್ಲಿ ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ. ಈ ವೇಳೆ ನ್ಯಾಯಾಲಯಕ್ಕೆ ಎಸ್​ಐಟಿ‌ ಅಧಿಕಾರಿಗಳು ಮನವಿ ಮಾಡಿದ್ರೂ, ಕಸ್ಟಡಿಗೆ ನೀಡುವುದು ಅನುಮಾನವಾಗಿದೆ. ಹೀಗಾಗಿ, ಮತ್ತೆ ನಾಳೆ ಬಾಡಿ ವಾರೆಂಟ್ ಹಾಕಿ ರೇವಣ್ಣರನ್ನು ಎಸ್​ಐಟಿ‌ ಹೆಚ್ಚಿನ ವಿಚಾರಣೆಗೆ ಪಡೆಯಬಹುದು.

ಯಾವುದೇ ಪ್ರಕರಣದಲ್ಲಾಗಲಿ ಆರೋಪಿಯನ್ನ ಓಪನ್ ಕೋರ್ಟ್ ನಲ್ಲಿ ಹಾಜರುಪಡಿಸಿದ್ರೆ ಮಾತ್ರ ಕಸ್ಟಡಿಗೆ ನೀಡುವ ಅವಕಾಶ ಇರುತ್ತದೆ. ಹೀಗಾಗಿ, ಒಂದು ದಿನದ ಮಟ್ಟಿಗೆ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಪರಪ್ಪನ ಅಗ್ರಹಾರ ಸೇರುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES