Saturday, May 4, 2024

ಬೇಗೂರು ಠಾಣೆಯ ಪೇದೆಯಿಂದ ಗನ್​ ಫೈರಿಂಗ್​: ರೈಟರ್ ಕಾಲಿಗೆ ತಾಗಿದ ಗುಂಡು!

ಬೆಂಗಳೂರು: ಕರ್ತವ್ಯ ನಿರತ ಪೊಲೀಸ್​ ಪೇದೆಯಿಂದ ಪಿಸ್ತೂಲ್​ ಮಿಸ್​ ಫೈಯರಿಂಗ್ ಆಗಿ ಠಾಣೆಯ ಮತ್ತೊಬ್ಬ ಪೇದೆ ರೈಟರ್​ ಕಾಲಿಗೆ ಗುಂಡೇಟು ಬಿದ್ದಿರುವ ಘಟನೆ ನಗರದ ಬೇಗೂರು ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ನಡೆದಿದೆ.

ಬೇಗೂರು ಠಾಣೆಯ ಎಸ್​.ಬಿ ಕಾನ್ಸ್​ಟೇಬಲ್​ ವೆಂಕಣ್ಣರಿಂದ ಪಿಸ್ತೂಲ್​ ಮಿಸ್ ಫೈಯರ್​ ಆಗಿದ್ದು, ರೈಟರ್​ ಅಂಬುದಾಸ್​ ಎಂಬುವವರ ಎಡಗಾಲಿಗೆ ಗುಂಡು ತಗುಲಿ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಅಂಬುದಾಸ್​ ಎನ್ನುವವರನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸೋನು ಶ್ರೀನಿವಾಸ್​ ಗೌಡ ಬಂಧನ: ಡಿಸಿಪಿ ಗಿರೀಶ್​ ಪ್ರತಿಕ್ರಿಯೆ!

ಲೋಕಸಭಾ ಚುನಾವಣೆ ಹಿನ್ನೆಲೆ ಬೇಗೂರು ಪೊಲೀಸ್​ ಠಾಣೆಯಲ್ಲಿದ್ದ ಪಿಸ್ತೂಲ್ ಗಳ​ನ್ನು ಮುಕುಂಡರೆಡ್ಡಿ ಎನ್ನುವವರು ಪಿಸ್ತೂಲಿನ ಬುಲೆಟ್​​ ಮ್ಯಾಗಜೀನ್​ ಕಳಚಿ ಜಮೆ ಮಾಡಿಟ್ಟಿದ್ದರು, ಬಳಿಕ ಪಿಸ್ತೂಲಿನಲ್ಲಿ ಬುಲೆಟ್ ಲಾಕ್​ ಆಗಿರುವ ಶಂಕೆಯಿಂದ ಪರಿಶೀಲನೆ ವೇಳೆ ಟ್ರಿಗರ್ ಒತ್ತಿದಾಗ ಮಿಸ್ ಫೈಯರ್ ಆಗಿದೆ.

ಘಟನೆ ಹಿನ್ನೆಲೆ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

RELATED ARTICLES

Related Articles

TRENDING ARTICLES