ಬೀದರ್ : ರಾಜ್ಯದ ಎರಡನೇ ಹಂತದ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಬೀದರ್ ಲೋಕಸಭಾ ಕ್ಷೇತ್ರ ಮತ್ತಷ್ಟು ರಂಗೇರಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಔರಾದ್ ಕ್ಷೇತ್ರದ ದಾಬಕಾ ಸರ್ಕಲ್ ನಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಬಿರು ಬಿಸಿಲಿನ ಮಧ್ಯೆ ಮೊದಲಿಗೆ ರೋಡ್ ಶೋ ನಡೆಸಿದ ಖೂಬಾ, ಬಳಿಕ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಖೂಬಾಗೆ ಉಮಾಕಾಂತ್ ನಾಗಮಾರಪಳ್ಳಿ ಸೇರಿದಂತೆ ಸ್ಥಳೀಯ ಹಲವು ನಾಯಕರು ಸಾಥ್ ನೀಡಿದರು.
ಭಗವಂತ ಗೆಲುವಿಗೆ ಪಣ ತೊಟ್ಟಿರುವ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ಬಿರು ಬಿಸಿಲು ಲೆಕ್ಕಿಸದೇ ಔರಾದ್ ಕ್ಷೇತ್ರದ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಭರ್ಜರಿ ಮತ ಬೇಟೆ ನಡೆಸಿದರು. ತಮ್ಮ ಸ್ವಕ್ಷೇತ್ರ ಔರಾದ್ ನ ಸಂತಪೂರ್, ದಾಬಕಾ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಿ ಪಾದಾಯತ್ರೆ ಮೂಲಕ ರ್ಯಾಲಿ ನಡೆಸಿ, ಪ್ರತಿಯೊಬ್ಬರಿಗೆ ಭಗವಂತ ಖೂಬಾಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಉಮಾಕಾಂತ ನಾಗಮಾರಪಳ್ಳಿಗೆ ಹೋದಲೆಲ್ಲ ಭಾರಿ ಸಂಖ್ಯೆಯಲ್ಲಿ ಜನ ಬೆಂಬಲ ವ್ಯಕ್ತಿವಾಯಿತು. ಭಗವಂತ ಖೂಬಾ ಕೂಡ ಔರಾದ್ ದವರೆ ಆಗಿದ್ದು, ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯದವರೇ ಇದಾರೆ. ನಾವೆಲ್ಲರೂ ಔರಾದ್ ಕ್ಷೇತ್ರದಿಂದ ಅತ್ಯಧಿಕ ಮತಗಳ ಲೀಡ್ ನೀಡಿ ಖೂಬಾ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಬೇಕು ಎಂದು ಹೇಳಿದರು.
ಖೂಬಾಗೆ ನೆಹರು ಮಹಾರಾಜ್ ಆಶೀರ್ವಾದ
ಔರಾದ್ನ ದಾಬಕಾದಲ್ಲಿ ನಡೆದ ನಾಗಮಾರಪಳ್ಳಿ ರೋಡ್ ಶೋನಲ್ಲಿ ಭಗವಂತ ಖೂಬಾ ಕೂಡ ಭಾಗಿಯಾದರು. ದಾಬಕಾದಲ್ಲಿ ರೋಡ್ ಶೋ ಬಳಿಕ ಬೃಹತ್ ಬಿಜೆಪಿ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಮರಾಠ ಮತ್ತು ಲಂಬಾಣಿ ಸಮುದಾಯದ ಸಾವಿರಾರು ಜನ ಭಾಗಿಯಾಗಿದ್ದರು. ಇನ್ನು ಬಂಜಾರಾ ಸಮಾಜದ ಕಾಶಿ ಎಂದೇ ಪ್ರಸಿದ್ದವಾಗಿರುವ ಪೌರಾದೇವಿ ಪೀಠದ ಶ್ರೀ ನೆಹರು ಮಹಾರಾಜ್ ಅವರು ಖೂಬಾಗೆ ಭೇಟಿಯಾಗಿ ಆಶೀರ್ವಾದ ಮಾಡಿದರು.
ಕ್ಷೇತ್ರದಾದ್ಯಂತ ಖೂಬಾಗೆ ಭಾರಿ ಬೆಂಬಲ
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಭಗವಂತ ಖೂಬಾಗೆ ಕ್ಷೇತ್ರದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಮೋದಿ ಹವಾ ಮತ್ತು ಖೂಬಾ ಮಾಡಿದ ಅಭಿವೃದ್ಧಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿ, ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾಗುವ ಸಾಧ್ಯತೆ ಎದ್ದು ಕಾಣುತ್ತಿದೆ.
ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ಹಾಗು ಬಂಜಾರಾ ಸಮಾಜದ ಕಾಶಿ ಎಂದೇ ಪ್ರಸಿದ್ಧವಾಗಿರುವ ಪವಿತ್ರ ಶ್ರೀ ಪೌರದೇವಿ ಮಾತಾ ಜಗದಂಬಾ ಹಾಗೂ ಸಂತ ಸೇವಾಲಾಲ ಮಹಾರಾಜರ ಪೀಠದ ಶ್ರೀ ನೆಹರು ಮಹಾರಾಜ್ ಅವರು ಬೀದರ್ ನ ಗೃಹ ಕಚೇರಿಗೆ ಆಗಮಿಸಿ ಆಶೀರ್ವದಿಸಿದ ಕ್ಷಣಗಳು…
ಬೀದರ್ ಕ್ಷೇತ್ರದಲ್ಲಿ ಕಳೆದ 10 ವರ್ಷಗಲ್ಲಿ ಆಗಿರುವ… pic.twitter.com/V8iaiTTe66
— Bhagwanth Khuba (Modi Ka Parivar) (@bhagwantkhuba) May 4, 2024