Saturday, April 27, 2024

ಗಂಡನ ಗುಪ್ತಾಂಗ ಹಿಚುಕಿ ಕೊಂದ ಪತ್ನಿ!

ಉತ್ತರ ಕನ್ನಡ : ಜಿಲ್ಲೆಯ ಮುಂಡಗೋಡ್ ದ ವ್ಯಕ್ತಿಯೊಬ್ಬನ ಸಾವು ಸಹಜ ಸಾವು ಎಂದು ತಿಳಿದು ಅಂತ್ಯಕ್ರಿಯೆ ಮಾಡಿ ಹದಿನೈದು ದಿನದ ಬಳಿಕ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು ಪತ್ನಿಯೇ ಪತಿಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಪಟ್ಟಣದ ಲಂಬಾಣಿ ತಾಂಡಾದ ಟೋಪನ್ ಜಗನಪ್ಪ ಲಮಾಣಿ(44) ಕೊಲೆಯಾದ ವ್ಯಕ್ತಿ. ಶಾಂತವ್ವ ಲಮಾಣಿ ಬಂಧಿತ ಆರೋಪಿಯಾಗಿದ್ದಾಳೆ. ಕುಡಿತದ ಚಟ ಹೊಂದಿದ್ದ ಟೋಪಣ್ಣ ಪ್ರತಿ ದಿನವೂ ಮದ್ಯ ಸೇವನೆ ಮಾಡುತ್ತಿದ್ದ. ಎಂದಿನಂತೆ ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದ ಗಂಡನು ಮನೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪತ್ನಿ ಶಾಂತವ್ವ ಸುದ್ದಿ ಬಿಂಬಿಸಿದ್ದಳು. ಅದನ್ನೆ ನಿಜವೆಂದು ನಂಬಿ ಹಿರಿಯರು ಟೋಪಣ್ಣನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.

ಇದನ್ನೂ ಓದಿ: ನಗರ್ತಪೇಟೆ ಹನುಮಾನ್ ಚಾಲೀಸ ಪ್ರಕರಣ: ಶೋಭ ಕರಂದ್ಲಾಜೆ ಪೊಲೀಸ್ ವಶಕ್ಕೆ

ಆದರೆ, ಶಾಂತವ್ವ ದಿನಗಳು ಕಳೆದಂತೆ ಪ್ರತಿ ದಿನವೂ ಮೊಬೈಲ್ ‌ನಲ್ಲಿ ಬೇರೆಯ ವ್ಯಕ್ತಿಯ ಜೊತೆ ಮಾತನಾಡುತ್ತಾ ಗಂಡನ ಮರ್ಮಾoಗವನ್ನು ಹಿಚುಕಿ ಕೊಲೆ ಮಾಡಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಂಡ ಅಕ್ಕ ಪಕ್ಕದ ಮನೆಯವರು ಸಮಾಜದ ಹಿರಿಯರಿಗೆ ವಿಷಯ ತಿಳಿಸಿದ್ದಾರೆ.

ನಂತರ ಹಿರಿಯರು ಸಭೆ ಸೇರಿ ಶಾಂತವ್ವ ಮೊಬೈಲ್ ಪೋನ್ ತಪಾಸಣೆ ಮಾಡಿ ವಿಚಾರಿಸಿದಾಗ ಗಂಡನ ಮರ್ಮಾಂಗವನ್ನು ಹಿಚುಕಿ ಸಾಯಿಸಿದ್ದೇನೆ ಎಂದು ಒಪ್ಪಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶಾಂತವ್ವಳನ್ನು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES