ರಾಮನಗರ : ಈ ಬಾರಿಯ ಲೋಕಸಭಾ ಚುನಾವಣೆ ಧರ್ಮಯುದ್ದ ಎಂಬ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಹೇಳಿಕೆಗೆ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಲ್ಲಿ ನಾವು ಯಾರನ್ನಾದರೂ ಮರ್ಡರ್ ಮಾಡಿದ್ದೀವಾ..? ನಾನಾಗಲಿ, ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಆಗಲಿ ಯಾರನ್ನಾದರೂ ಮರ್ಡರ್ ಮಾಡಿದ್ದೀವಾ..? ಎಫ್ಐಆರ್ ಹಾಕಿಸಿದ್ದೀವಾ..? ಎಂದು ಕುಟುಕಿದರು.
ನಾವು ಸ್ವಲ್ಪ ಹೊರಟಿದ್ದೀವಿ, ಹಾಲಲ್ಲ ಅಂದ್ರೆ ಆಲದಮರ ನಂಬಬೇಕು. ಮಳ್ಳಿ ರೀತಿ ಇರೋ ಕಳ್ಳಿ ಗಿಡವನ್ನ ನಂಬಬಾರದು. ಕಳ್ಳಿಗಿಡ ಎಷ್ಟು ಡೇಂಜರ್ ಅಂತ ಗೊತ್ತಿಲ್ವಾ..? ಡಾಕ್ಟರ್ ಬಗ್ಗೆ ನಮಗೆ ತುಂಬಾ ಗೌರವ ಇದೆ. ಡಾಕ್ಟರ್, ಡಾಕ್ಟರ್ ಕೆಲಸಾನೇ ಮಾಡಬೇಕು. ರಾಜಕಾರಣಿ ರಾಜಕೀಯಾನೇ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಇಬ್ಬರನ್ನು ತಕ್ಕಡಿಯಲ್ಲಿ ಇಟ್ಟು ತೂಕಮಾಡಿ
ಡಾ. ಮಂಜುನಾಥ್ ತಮ್ಮ ಜನಪ್ರೀಯತೆಯಲ್ಲೇ ಗೆಲ್ತಾರೆ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಇದು ಭ್ರಮೆ. ಅವರು ಸರ್ಕಾರಿ ನೌಕರಿಯಲ್ಲಿದ್ದು, ಸೇವೆ ಮಾಡಿದ್ದಾರೆ. ಇಬ್ಬರನ್ನು ತಕ್ಕಡಿಯಲ್ಲಿ ಇಟ್ಟು ತೂಕಮಾಡಿ. ಅಭಿವೃದ್ದಿ ವಿಚಾರದಲ್ಲಿ ಯಾರು ಅನ್ನೋದು ಜನ ತೀರ್ಮಾನ ಮಾಡ್ತಾರೆ ಎಂದು ಬಾಲಕೃಷ್ಣ ಹೇಳಿದರು.