Sunday, April 28, 2024

ಡಾ. ಮಂಜುನಾಥ್​ಗೆ​ ವೋಟು ಹಾಕಿದ್ರೆ ಸ್ವರ್ಗದ ಬಾಗಿಲು, ಅವ್ರಿಗೆ ಮತ ಹಾಕಿದ್ರೆ ನರಕದ ಬಾಗಿಲು : ಶಾಸಕ ಮುನಿರತ್ನ

ರಾಮನಗರ : ಡಾ. ಮಂಜುನಾಥ್ ಅವರಿಗೆ ವೋಟು ಹಾಕಿದರೆ ಮುಂದೆ ಸ್ವರ್ಗದ ಬಾಗಿಲು. ಬೇರೆಯವರಿಗೆ ವೋಟು ಹಾಕಿದರೆ ನರಕದ ಬಾಗಿಲು ಎಂದು ಡಿ.ಕೆ. ಬ್ರದರ್ಸ್ ವಿರುದ್ಧ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು.

ಕನಕಪುರದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಡಾ. ಮಂಜುನಾಥ್​ ಅವರಿಗೆ ಮತ ಹಾಕಿದ್ರೆ, ಈ ಗ್ರಾಮಾಂತರ ಕ್ಷೇತ್ರಕ್ಕೆ ಒಬ್ಬ ಕೇಂದ್ರ ಸಚಿವರು ಸಿಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗುವುದು ಅಷ್ಟೇ ಸತ್ಯ. ನಾನು 40 ವರ್ಷದ ಹಿಂದೆ ಕನಕಪುರ ನೋಡಿದ್ದು. ಏನು ಅಭಿವೃದ್ಧಿ ಆಗಿಲ್ಲ, ಕೆಲ ರಸ್ತೆಗೆ ಸುಣ್ಣಬಣ್ಣ ಹೊಡೆದಿದ್ದಾರೆ. ರಾಮನಗರ ಶಾಸಕ ಗಂಡಸ್ತನದ ಬಗ್ಗೆ ಮಾತನಾಡ್ತಾರೆ. ನಾನು ರಾಮನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಉತ್ತರ ಕೊಡ್ತೇನೆ. ಕುಮಾರಣ್ಣನ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡೋದು ಬಹಳ ತಪ್ಪು, ಹೇಳಬಾರದು. 5 ಸಾವಿರ ಗಿಫ್ಟ್ ಕಾರ್ಡ್ ಕೊಟ್ರಲ್ಲ, ಅದನ್ನ ಕೊಡಿ ಮೊದಲು ಎಂದು ಕುಟುಕಿದರು.

ಕನಕಪುರದಲ್ಲೇ ಹೆಚ್ಚು ವೋಟು ಬರುತ್ತೆ

ಈ ಬಾರಿ ಮಂಜುನಾಥ್ ಅವರು ಗೆಲ್ಲುವುದರಲ್ಲಿ ಯಾವ ಅನುಮಾನ ಇಲ್ಲ. ಅವರನ್ನು ಸೋಲಿಸುತ್ತೇವೆ ಅಂದ್ರೆ ಅವರಂತಹ ದಡ್ಡರು ಇಲ್ಲ. ಅವರ ಗೆಲುವನ್ನ ತಡೆಯೋ ಶಕ್ತಿ ಎಲ್ಲೂ ಇಲ್ಲ. ಈ ಬಾರಿ ಕನಕಪುರದಲ್ಲೇ ಹೆಚ್ಚು ಮತ ಬರಲಿದೆ. 140 ಕೋಟಿ ಜನರಲ್ಲಿ ಅವರಿಗೆ ಒಂದು ಕಪ್ಪು ಚುಕ್ಕಿ ಇಲ್ಲ. ಮುಂದೆ ದೇವೇಗೌಡರು, ಕುಮಾರಸ್ವಾಮಿ ಸೇರಿ ದೊಡ್ಡ ಸಭೆ ಮಾಡ್ತೇವೆ. ಈಗಾಗಲೇ ಎಲ್ಲಾ ರೀತಿ ತಯಾರಾಗಿದೆ. ಕನಕಪುರದಲ್ಲಿ 1 ವೋಟು ಲೀಡ್ ಕೊಟ್ಟರೆ, ನಾನು 1 ಲಕ್ಷ ಲೀಡ್ ಕೊಡ್ತೇವೆ. ಇದು ಇಡೀ ಕನಕಪುರದಲ್ಲೇ ಪ್ರಚಾರ ಆಗಬೇಕು ಎಂದು ಮುನಿರತ್ನ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES