ಬೆಂಗಳೂರು: ಕಿಲ್ಲರ್ BMTC ಬಸ್ಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಬಳಿ ಇರುವ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ. ಚೇತನ್( 35)ಬಲಿಯಾದ ದುರ್ದೈವಿ.
ಘಟನೆಯ ವಿವರ
ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಆಂದ್ರ ಮೂಲದ ಚೇತನ್ ಸ್ಥಳದಲ್ಲೇ ನಿನ್ನೇ ಸಾವನಪ್ಪಿದ್ದಾನೆ.
ಪೊಲೀಸರು ಶಿವಕುಮಾರ್ ಎಂಬ ಚಾಲಕನನ್ನ ವಶಕ್ಕೆ ಪಡೆದು ಬಸ್ನ್ನು ಸೀಝ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.