ಬೆಂಗಳೂರು ಗ್ರಾಮಾಂತರ: ರೆಸ್ಟೋರೆಂಟ್ ಪರವಾನಗಿ ನವೀಕರಣ ಮಾಡುವುದಕ್ಕೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಓ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಮಂಗಳವಾರ ನಡೆದಿದೆ.
ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ, ತಾಲೂಕಿನ ಅರಳು ಮಲ್ಲಿಗೆ ಗ್ರಾ.ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್ ಪರವಾನಗಿ ನವೀಕರಿಸುವ ಸಲುವಾಗಿ ನರಸಿಂಹಮೂರ್ತಿ ಎಂಬುವವರು ಪಿಡಿಒ ನಿರಂಜನ್ನನ್ನು ಭೇಟಿಯಾಗಿದ್ದರು, ಈ ವೇಳೆ ಪಿಡಿಒ ನರಸಿಂಹ ಮೂರ್ತಿಗೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ 3.5 ಲಕ್ಷಕ್ಕೆ ಮಾತುಕತೆಯಾಗಿತ್ತು.
ಇದನ್ನೂ ಓದಿ: ವೈದ್ಯರ ಮುಂದೆ ಹೆಚ್.ಡಿ. ರೇವಣ್ಣ ಕಣ್ಣೀರು, ನಾಳೆಗೆ ರೇವಣ್ಣ ಕಸ್ಟಡಿ ಅಂತ್ಯ
ಇದೇ ವಿಚಾರವಾಗಿ ನರಸಿಂಹಮೂರ್ತಿ ಬೆಂಗಳುರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಗೆ ಪಿಡಿಒ ನಿರಂಜನ್ ವಿರುದ್ದ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರ್ ನೇತೃತ್ವದಲ್ಲಿ ಕಾರ್ಯಾಚರಣೆ ಇಳಿದ ಲೋಕಾಯುಕ್ತ ಅಧಿಕಾರಿಗಳು, ಪಿಡಿಒ ನಿರಂಜನ್ ನಗರದ ತಾಲೂಕು ಕಚೇರಿ ಆವರಣದಲ್ಲಿ ನರಸಿಂಹಮೂರ್ತಿಯ ಬಳಿ ಲಂಚದ ಹಣ ಸ್ವೀಕರಿಸುವಾಗ ಹಣದ ಸಮೇತ ಪಿಡಿಓ ನಿರಂಜನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.