Sunday, May 19, 2024

ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣ: ಡಿಕೆ ಶಿವಕುಮಾರ್​ ಹೆಸರು ಪ್ರಸ್ತಾಪಕ್ಕೆ ಜೆಡಿಎಸ್​-ಬಿಜೆಪಿ ವಿರುದ್ದ ಕೆಪಿಸಿಸಿ ಕಿಡಿ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್​ಡ್ರೈವ್​ ಪಕ್ರರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ದ ಜೆಡಿಎಸ್​ ಹಾಗು ಬಿಜೆಪಿ ಟೀಕೆ ಮಾಡುತ್ತಿರುವ ಹಿನ್ನೆಲೆ ಕೆಪಿಸಿಸಿಯೂ ತನ್ನ ಎಕ್ಸ್​ ಖಾತೆಯಲ್ಲಿ ಜೆಡಿಎಸ್​-ಬಿಜೆಪಿ ವಿರುದ್ದ ಕಿಡಿಕಾರಿದೆ.

ಕೆಪಿಸಿಸಿ ಹಂಚಿಕೊಂಡಿರುವ ಈ ಪೋಸ್ಟ್​ನಲ್ಲಿ, ವಿಡಿಯೋ ಶೂಟ್ ಮಾಡಿಕೊಂಡಿದ್ದು ಪ್ರಜ್ವಲ್, ಮಹಿಳೆಯರನ್ನು ಅಮಾನವೀಯವಾಗಿ ಬಳಸಿಕೊಂಡಿದ್ದು ಪ್ರಜ್ವಲ್, ವಿಡಿಯೋ ಕದ್ದಿದ್ದು ಡ್ರೈವರ್ ಕಾರ್ತಿಕ್, ಕಾರ್ತಿಕ್ ನಿಂದ ಪೆನ್ ಡ್ರೈವ್ ಪಡೆದುಕೊಂಡಿದ್ದು ದೇವರಾಜೇಗೌಡ, ವಿಡಿಯೋ ಇದೆ, ಹೊರಗೆ ಬಿಡ್ತೀನಿ ಎಂದು ಹಲವಾರು ಬಾರಿ ಹೇಳಿದ್ದು ದೇವರಾಜೇಗೌಡ, ಪೆನ್ ಡ್ರೈವ್ ಹೊರಗೆ ಬಿಟ್ಟಿದ್ದು ದೇವರಾಜೇಗೌಡ, ದೇವರಾಜೇಗೌಡ ಪತ್ರ ಬರೆದಿದ್ದು ವಿಜಯೇಂದ್ರ ಹಾಗೂ ಅಮಿತ್ ಶಾ ಅವರಿಗೆ, ಅದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಬ್ರದರ್ ಸ್ವಾಮಿ!.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ: ವ್ಯಕ್ತಿಯ ಮೇಲೆ ಬಿದ್ದ ಮರ, ಸೊಂಟ ಮರಿದುಕೊಂಡ ಟೆಕ್ಕಿ

ಈ ಎಲ್ಲಾ ಘಟನೆಗಳಲ್ಲೂ ಬಿಜೆಪಿ – ಜೆಡಿಎಸ್ ನವರೇ ಇದ್ದಾರೆ, ಹೀಗಿರುವಾಗ ಡಿಕೆ ಶಿವಕುಮಾರ್​
ಅವರ ಹೆಸರು ಎಳೆದಿದ್ದು ಬಿಜೆಪಿಯ ಹೀನ ರಾಜಕಾರಣದ ಮುಂದುವರೆದ ಭಾಗವಷ್ಟೇ. ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ನಿಜಕ್ಕೂ ನೈತಿಕತೆ ಇದ್ದರೆ ಈ ಕೊಳಕು ರಾಜಕಾರಣ ಬಿಟ್ಟು ನೊಂದ ಮಹಿಳೆಯರಿಗೆ ಸಾಂತ್ವನ ಹೇಳಲಿ ಎಂದು ಕಿಡಿಕಾರಿದೆ.

RELATED ARTICLES

Related Articles

TRENDING ARTICLES