Thursday, May 9, 2024

ನನ್ನನ್ನ ಲಿಂಗಾಯತ ವಿರೋಧಿ ಎಂದವರ ನಾಲಗೆ ಕತ್ತರಿಸಬೇಕು : ಸಂಸದ ಜಿಗಜಿಣಗಿ

ವಿಜಯಪುರ : ನನ್ನನ್ನು ಲಿಂಗಾಯತ ವಿರೋಧಿ ಎನ್ನುವವರ ನಾಲಗೆ ಕತ್ತರಿಸಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಕಿಡಿಕಾರಿದ್ದಾರೆ.

ವಿಜಯಪುರ ರೈಲು ನಿಲ್ದಾಣದಲ್ಲಿ ‘ಒಂದು ನಿಲ್ದಾಣ, ಒಂದು ಪ್ರಾಡಕ್ಟ್’ ಯೋಜನೆ ಕಾರ್ಯಕ್ರಮ ಉದ್ಘಾಟನೆ ಬಳಿಕೆ ಅವರು ಮಾತನಾಡಿದ್ದಾರೆ.

ನಾನು 30 ವರ್ಷದ ರಾಜಕಾರಣದಲ್ಲಿ ಯಾವುತ್ತು ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಜನರ ನಮ್ಮವರು ಎಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಕೆಲವರು ಮಾಧ್ಯಮಗಳ ಮೂಲಕ ನಾನು ಲಿಂಗಾಯತ ವಿರೋಧಿ ಅನ್ನಿಸುತ್ತಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದವರ ನಾಲಗೆ ಕತ್ತರಿಸಬೇಕು. ದೇವರೇ ಅವರ ನಾಲಗೆಯನ್ನ ಕಟ್ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಅನಂತಕುಮಾರ್ ಹೆಗಡೆಯನ್ನ ನಾಯಿಗೆ ಹೋಲಿಸಿದ ಶಾಸಕ ಪ್ರದೀಪ್ ಈಶ್ವರ್

ದಲಿತರನ್ನ ಕಟ್ಟಿಕೊಂಡು ರಾಜಕೀಯ ಮಾಡಿಲ್ಲ

ಟಿವಿಯಲ್ಲಿ ಒಬ್ಬ ವ್ಯಕ್ತಿ ಲಿಂಗಾಯತ ವಿರೋಧಿ ಎಂದು ಭಾಷೆ ಬಳಸಿದ್ದಾರೆ. ದೇವರು ಅವನ ನಾಲಿಗೆ ಕತ್ತರಿಸಲಿ. ನಾನು ದಲಿತರನ್ನ ಕಟ್ಟಿಕೊಂಡು ರಾಜಕೀಯ ಮಾಡಿದ್ದರೆ, ಇಷ್ಟು ಮುಂದಕ್ಕೆ ಬರೋಕೆ ಆಗ್ತಾ ಇರಲಿಲ್ಲ ಎಂದು ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES