Sunday, April 28, 2024

ತಮಿಳುನಾಡಿಗೆ ಒಂದು ತೊಟ್ಟು ನೀರೂ ಬಿಟ್ಟಿಲ್ಲ, ಅದೆಲ್ಲ ಸುಳ್ಳು : ಸಿದ್ದರಾಮಯ್ಯ ಸ್ಪಷ್ಟನೆ

ಚಾಮರಾಜನಗರ : ಕಾವೇರಿ ನೀರು ತಮಿಳುನಾಡಿಗೆ ಹೋಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಚಾಮರಾಜನಗರ ಜಿಲ್ಲೆ ಹೆಗ್ಗವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ಒಂದು ತೊಟ್ಟು ನೀರು ಸಹ ಬಿಟ್ಟಿಲ್ಲ, ಅದೆಲ್ಲ ಸುಳ್ಳು ಎಂದು ಅಲ್ಲಗಳೆದರು.

ನಮ್ಮಲ್ಲೇ ನೀರು ಇಲ್ಲ, ಎಲ್ಲಿಂದ ನೀರು ಬಿಡೋದು..? ಅದಕ್ಕೂ ಮೊದಲು ಅವರು ಈಗ ನೀರು ಬೇಕು ಅಂತಾನೇ ಕೇಳಿಲ್ಲ. ಕೇಂದ್ರ ಸರ್ಕಾರವೇ ಆಗಲಿ.. ತಮಿಳುನಾಡು ಸರ್ಕಾರವೇ ಆಗಲಿ.. ನೀರು ಬಿಡಿ ಎಂದರೆ ಬಿಡಲು ಸಾಧ್ಯವೇ ಇಲ್ಲ ಎಂದು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದರು.

ಅನಂತಕುಮಾರ್ ಸಾಮಾನ್ಯ ವ್ಯಕ್ತಿಯೇನಲ್ಲ

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನದ ಬದಲಾವಣೆ ಬಿಜೆಪಿಯವರ ಅಜೆಂಡಾ. ಬಿಜೆಪಿ ಪಕ್ಷದವರೇ ಅನಂತಕುಮಾರ್ ಮೂಲಕ ಹೇಳಿಸುತ್ತಿದ್ದಾರಷ್ಟೇ. ಅನಂತಕುಮಾರ್ ಹೆಗಡೆ ಸಾಮಾನ್ಯ ವ್ಯಕ್ತಿಯೇನಲ್ಲ. ಮೂರು ಬಾರಿ ಎಂಪಿಯಾಗಿ ಕೇಂದ್ರ ಸಚಿವರಾಗಿದ್ದವರು. ಈ ರೀತಿ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಆ ಪಕ್ಷದ ನಿಲ್ಲುವು ಎಂದು ಕುಟುಕಿದರು.

RELATED ARTICLES

Related Articles

TRENDING ARTICLES