ಬೆಳಗಾವಿ : ಗೀತಾ ಶಿವರಾಜ್ಕುಮಾರ್ ನನ್ನ ಹೆಂಡ್ತಿ ಆಗಿರೋದ್ರಿಂದ್ರ ನಾನು ಜಾಸ್ತಿ ಸಪೋಟ್ ಮಾಡಬೇಕು ಎಂದು ನಟ ಶಿವರಾಜ್ಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಪತ್ನಿ ಪರ ಪ್ರಚಾರ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಲೋಕಸಭೆ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಎಲ್ಲೆಡೆ ಪ್ರಚಾರ ಮಾಡ್ತಿರಾ? ಎಂಬ ಪ್ರಶ್ನೆಗೆ, ಟೈಮ್ ಇದ್ದರೆ ಚುನಾವಣೆ ಪ್ರಚಾರಕ್ಕೆ ಬರ್ತಿನಿ. ಟೈಮ್ ನೋಡಿಕೊಂಡು ತೀರ್ಮಾನ ಮಾಡುತ್ತೇನೆ. ನಾನು ಶೂಟಿಂಗ್ ಹೋಗಬೇಕು. ಗೀತಾ ಅವರ ಪ್ಲ್ಯಾನ್ ಏನೇನು ಇದೆ ಅನ್ನೋದನ್ನ ನೋಡಬೇಕು ಎಂದು ತಿಳಿಸಿದರು.
ಎಲ್ಲರೂ ಬರ್ತಾರೆ, ನಾನೇ ಕರೆದುಕೊಂಡು ಬರ್ತಿನಿ
ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆ ವರ್ಕೌಟ್ ಆಗುತ್ತಾ? ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ, ಒಟ್ಟಿನಲ್ಲಿ ನಾನು ಪ್ರಚಾರಕ್ಕೆ ಹೋಗ್ತಿದ್ದೀನಿ. ಮೋಸ್ಟಲಿ ವರ್ಕೌಟ್ ಆಗ್ತಿದೆ. ಮಹಾದಾಯಿ ಹೋರಾಟದಲ್ಲಿ ನೂರರಷ್ಟು ನಟರು ಬರ್ತಾರೆ. ಈ ಬಾರಿ ಎಲ್ಲರೂ ಬರ್ತಾರೆ, ನಾನೇ ಕರೆದುಕೊಂಡು ಬರ್ತಿನಿ ಎಂದು ನಟ ಶಿವಕುಮಾರ್ ಭರವಸೆ ನೀಡಿದರು.
ಕುಂದಾ ಸ್ವೀಟ್ ನಮ್ಮ ಕುಟುಂಬಕ್ಕೆ ತುಂಬಾ ಇಷ್ಟ
ಕರಟಕ ಧಮನಕ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಹಾಸ್ಯದೊಂದಿಗೆ ಅದ್ಭುತ ಸಂದೇಶ ಇರುವ ಚಿತ್ರ. ಚಿತ್ರವನ್ನು ಎಲ್ಲರೂ ನೋಡುವಂತಿದೆ. ಉತ್ತರ ಕರ್ನಾಟಕ ಶೈಲಿಯ ಚಿತ್ರವಿದೆ. ಅಪ್ಪಾಜಿ ಅವರ ಕಾಲದಿಂದಲೂ ಬೆಳಗಾವಿಗೂ ನಮ್ಮ ಕುಟುಂಬಕ್ಕೆ ನಂಟಿದೆ. ಬೆಳಗಾವಿ ಕುಂದಾ ಸ್ವೀಟ್ ನಮ್ಮ ಕುಟುಂಬಕ್ಕೆ ತುಂಬಾ ಇಷ್ಟ ಎಂದು ಶಿವಕುಮಾರ್ ತಿಳಿಸಿದರು.