ಮಂಡ್ಯ: ನಾನು ಯಾವುದೇ ಚುನಾವಣಾ ಪ್ರಚಾರಕಕ್ಕೆ ಹೋಗುವುದಿಲ್ಲ ಎಂದು ನಟ ಡಾಲಿ ಧನಂಜಯ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪಂಚಲಿಂಗೇಶ್ವರನ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲ್ಲ ಸ್ಟಾರ್ ಚಂದ್ರುಗೆ ಒಳ್ಳೆಯದಾಗಲಿ ಎಂದು ಕೆರಗೋಡು ಗ್ರಾಮದಲ್ಲಿ ಹೇಳಿಕೆ ನೀಡಿದ್ದರು.
ನನಗೆ ಸದ್ಯಕ್ಕೆ ಯಾವುದೇ ಐಡಿಯಾ ನನ್ನಲಿಲ್ಲ, ಪದೇ ಪದೇ ಕೇಳಬೇಡಿ ನನ್ನದು ಸಿನಿಮಾ, ಸಿನಿಮಾ ನನ್ನ ಬದುಕು ಅಷ್ಟೆ ಮಹಾ ಶಿವರಾತ್ರಿ ದಿನ ಒಳ್ಳೆಯ ಕಾರ್ಯಕ್ರಮಕ್ಕೆ ಕರೆದಿದ್ರು ಬಂದೆ ಅಷ್ಟೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ಲಾ ಏನಿಲ್ಲ ಏನಿಲ್ಲ: ಆರ್. ಅಶೋಕ್
ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು,ಚಲನಚಿತ್ರೋತ್ಸವದ ಹಿನ್ನಲೆಯಲ್ಲಿ ಭೇಟಿ ಮಾಡಿದ್ದು ಅಷ್ಟೆ.ಚುನಾವಣೆಯಲ್ಲಿ ಯಾರೆಲ್ಲ ಸ್ಪರ್ಧೆ ಮಾಡ್ತಿದ್ದಾರೆ ಅವರಿಗೆಲ್ಲ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ.ಅಧಿಕಾರಕ್ಕೆ ಬರುವವರು ಒಳ್ಳೆಯ ಆಡಳಿತ ಕೊಡಿ, ವಿರೋಧ ಪಕ್ಷಕ್ಕೆ ಯಾರು ಬರ್ತಾರೆ ಅವರು ಕೂಡ ಒಳ್ಳೆಯ ಕೆಲಸ ಮಾಡಿ ಈ ಸಮಾಜದಲ್ಲಿ ಎರಡೂ ಇಂಪಾರ್ಟೆಂಟ್ ಎಂದು ಹೇಳಿದರು.
ನಾನು ಚುನಾವಣೆ ಪ್ರಚಾರ ಮಾಡಲ್ಲ
ನಾನು ಚುನಾವಣೆ ಪ್ರಚಾರ ಮಾಡಲ್ಲ,ಎಂಎಲ್ ಎ ಚುನಾವಣಾ ವೇಳೆ ಕರೆದಿದ್ರು ನಾನು ಹೋಗಿಲ್ಲ.
ಸ್ಟಾರ್ ಚಂದ್ರು ಅವರಿಗೂ ಒಳ್ಳೆಯದಾಗಲಿ ಎಂದರು.