Saturday, April 27, 2024

ರಾಮಮಂದಿರ ಆಯ್ತು.. ಕಾಶಿ, ಮಥುರಾನೂ ಹಿಂದೂಗಳ ಕೈಗೆ ಬರುತ್ತೆ : ಅನಂತಕುಮಾರ್ ಹೆಗಡೆ

ಬೆಳಗಾವಿ : ರಾಮಮಂದಿರ, ಕಾಶ್ಮೀರ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕಾಶಿ, ಮಥುರಾ ಹಿಂದೂಗಳ ಕೈಗೆ ಬರಲಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲಿ ಇರುವ ಜಾಗ ನಮ್ಮ ಹಿಂದೂಗಳಿಗೆ ಮರಳಿ ಬರಲಿದೆ. ಇದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಪ್ರಧಾನಿ ಮೋದಿ ಸರ್ಕಾರ ಇರಬೇಕು. ಕಾಂಗ್ರೆಸ್​​ನಿಂದ ಏನು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರ ನಾಲ್ಕೈದು ಗ್ಯಾರಂಟಿ ಜೊತೆಗೆ ಸುತ್ತಾಡುತ್ತಿದೆ. ವೇತನ ಕೊಡಲು ಸಹ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ನೌಕರರನ್ನು ಒಮ್ಮೆ ಕೇಳಿ ನೋಡಿ. ಮೋದಿ ಅವರ ಗ್ಯಾರಂಟಿ 10 ವರ್ಷಗಳಿಂದ ನಡೆಯುತ್ತಿದೆ. ಮೋದಿ ಗ್ಯಾರಂಟಿಯಿಂದ ದೇಶ ಬಲಿಷ್ಠವಾಗುತ್ತಿದೆ ಎಂದು ಚಾಟಿ ಬೀಸಿದರು.

400ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ

ಕಳೆದ ಸಲ ಸಿಕ್ಕ ಬಹುಮತ ಮತ್ತೆ ಸಿಗಲಿದೆ. ಖಾನಾಪುರದಲ್ಲಿ 1.5ಲಕ್ಷ ಲಿಡ್ ಸಿಕ್ಕು ದಾಖಲೆ ನಿರ್ಮಾಣ ಆಗಲಿದೆ. ನಿಮ್ಮೆಲ್ಲರಲ್ಲಿ ನಮ್ಮ ಮನವಿ ಇದೆ. ಬಿಜೆಪಿ ಪರ ನೀವು ಎಲ್ಲರಲ್ಲಿಯೂ ಮತಯಾಚನೆ ಮಾಡಿ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶ ಉಳಿಯಲು ಮೋದಿ ಇರಬೇಕು

ದೇಶ ಉಳಿಯಬೇಕು ಅಂದರೆ ದೇಶದಲ್ಲಿ ಮೋದಿ ಸರ್ಕಾರ ಇರಬೇಕು. ಕಾಂಗ್ರೆಸ್​​ನಿಂದ ಏನು ಸಾಧ್ಯವಿಲ್ಲ. ಹಿಂದೂ ಸಮಾಜದಲ್ಲಿ ಮನೆಯ ಕಾರ್ಯಕ್ರಮ ಇದ್ರು ಆಮಂತ್ರಣ ಕೊಡಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

RELATED ARTICLES

Related Articles

TRENDING ARTICLES