Saturday, May 4, 2024

ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿ ಆಕಾಂಕ್ಷಿಗಳಿದ್ರೆ ಬನ್ನಿ.. ಧಮ್ ಇದ್ರೆ ಬನ್ನಿ : ಅನಂತಕುಮಾರ್ ಹೆಗಡೆ

ಕಾರವಾರ : ನನ್ನ ಎದುರು ಚುನಾವಣೆ ಸ್ಪರ್ಧೆ ಮಾಡುವ ಬಿಜೆಪಿ ಆಕಾಂಕ್ಷಿಗಳಿದ್ರೆ ಬನ್ನಿ.. ಈಗಲೇ ಬನ್ನಿ, ಧಮ್ ಇದ್ರೆ ಬನ್ನಿ ಎಂದು ಕುರ್ಚಿ ಎತ್ತಿಹಿಡಿದು ಸಂಸದ ಅನಂತಕುಮಾರ್ ಹೆಗಡೆ ಸವಾಲ್ ಹಾಕಿದರು.

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಟೇಬಲ್ ಮೇಲೆ ಖುರ್ಚಿ ಇಟ್ಟು ಯುವಕರಿಗೆ ಅಹ್ವಾನ ಕೊಟ್ಟರು.

ಚುನಾವಣೆಗೆ ಸ್ಪರ್ಧಿಸಲು ಯಾರಾದರೂ ಯುವಕರು ತುಂಬಾ ಸಶಕ್ತರಾಗಿದ್ದರೆ ಬನ್ನಿ. ಇಂದೇ ಖುರ್ಚಿ ಮುಂದೆ ಇಟ್ಟು ಹೊಗ್ತೇನೆ. ಧಮ್ ಇದ್ರೆ ಮುಂದೆ ಬನ್ನಿ. ಸಂಸತ ಚುನಾವಣೆಗೆ ಸ್ಪರ್ಧಿಸಲು ಧಮ್ ಇದ್ರೆ ಮುಂದೆ ಬನ್ನಿ ಎಂದು ಹೇಳಿದರು.

ನಾನು ಬಾರಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕು

ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಬೇಕಿದೆ. ನಂಗೆ ರಾಜಕೀಯ ಬೇಡ, ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ನೇರವಾಗಿ ಹೇಳಿದ್ದೆ. ಆದ್ರೂ ಕೆಲವರು ನನ್ನ ಬಳಿ ಬಂದೂ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ರು. ಹೇಗೋ ಯೂಟರ್ನ್ ಮಾಡ್ಕೊಂಡ ಮತ್ತೆ ರಾಜಕೀಯದಲ್ಲಿ ಮುಂದುವರಿಯುತ್ತಿದ್ದೇನೆ ಎಂದು ತಿಳಿಸಿದರು.

ಯಾರಾದ್ರೂ ಉತ್ತರ ಕುಮಾರರು ಸ್ಪರ್ಧೆಗೆ ರೆಡಿ ಇದ್ರೆ ಬನ್ನಿ

ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ನಾನು ರಾಜಕಾರಣಿಯಾಗಿ ಸಾಯುವುದಿಲ್ಲ. ರಾಜಕಾರಣದಲ್ಲಿ ಮುಂದುವರಿಯುವ ಅನಿವಾರ್ಯತೆಯೂ ನಮಗಿಲ್ಲ. ರಾಜಕಾರಣ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಹಾಗಾಗಿದ್ರೆ ಎಲ್ಲರೂ ರಾಜಕಾರಣ ಮಾಡುತ್ತಿದ್ರು. ನಾನು ಚಾಲೆಂಜ್ ಮಾಡುತ್ತೇನೆ. ಯಾರಾದರೂ ಉತ್ತರ ಕುಮಾರರು ಸ್ಪರ್ಧೆಗೆ ರೆಡಿ ಇದ್ರೆ ಬನ್ನಿ. ಈ ಕ್ಷೇತ್ರದ ಅರಿವೆ ಇಲ್ಲದವರು ಪಾರ್ಲಿಮೆಂಟ್ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಷ್ಟೊ ಜನರಿಗೆ ಕಿತ್ತೂರು, ಖಾನಾಪೂರ ನಕ್ಷೆಯಲ್ಲಿ ಎಲ್ಲಿ ಬರುತ್ತೆ ಅನ್ನೋದೆ ಗೊತ್ತಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಕುಟುಕಿದರು.

RELATED ARTICLES

Related Articles

TRENDING ARTICLES