Thursday, May 2, 2024

ಅಮ್ಮ ಕಾಲ್ ಮಾಡಿದ್ದಕ್ಕೆ ನಾನು ಬದುಕಿದ್ದೇನೆ : ಭಯಾನಕ ಅನುಭವ ಬಿಚ್ಚಿಟ್ಟ ಯುವಕ

ಬೆಂಗಳೂರು : ನಮ್ಮ ಅಮ್ಮ ಕರೆ ಮಾಡಿದ್ದರಿಂದ ಭಾರಿ ಅನಾಹುತದಿಂದ ನಾನು ಪಾರಾದೆ ಎಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಸ್ಫೋಟವಾದ ಬಳಿಕ ಮೊದಲ ವಿಡಿಯೋ ಹಂಚಿಕೊಂಡಿದ್ದ ಪ್ರತ್ಯಕ್ಷದರ್ಶಿ ಬಿಹಾರದ ಪಾಟ್ನಾ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್ ಅಲಂಕೃತ್ ಘಟನೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಆರ್ಡರ್ ಮಾಡಿದ್ದ ಫುಡ್​ ತೆಗೆದುಕೊಂಡ ಕೂಡಲೇ ನನ್ನ ತಾಯಿ ಕರೆ ಮಾಡಿದರು. ನನ್ನ ತಾಯಿ ಜೊತೆ ಮಾತನಾಡುತ್ತಾ ಹೋಟೆಲ್‌ನಿಂದ 10 ರಿಂದ 15 ಮೀಟರ್‌ ಅಂತರದ ದೂರಕ್ಕೆ ಬಂದಿದ್ದೆ. ಕೆಲವೇ ಸೆಕೆಂಡ್‌ಗಳಲ್ಲಿ ನನಗೆ ಜೋರಾದ ಶಬ್ಧ ಕೇಳಿಸಿತು. ಎತ್ತ ನೋಡಿದರೂ ಹೊಗೆ ತುಂಬಿ ಕೊಂಡಿತ್ತು. ಹಿಂದೆಂದೂ ಇಂತಹ ಪರಿಸ್ಥಿತಿ ನಾನು ಎದುರಿಸಿರಲಿಲ್ಲ’ ಎಂದು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.

ಬ್ಲಾಸ್ಟ್‌ನ ಮೊದಲ ವಿಡಿಯೋ ಶೇರ್

ವರ್ಕ್‌ ಫ್ರಂ ಹೋಂ ಮಾಡುತ್ತಿದ್ದ ಅಲಂಕೃತ್ ಶುಕ್ರವಾರ ಬ್ರೂಕ್‌ಫೀಲ್ಡ್‌ನಲ್ಲಿರುವ ತನ್ನ ಬಾಡಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕೆಫೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿತ್ತು. ಕುಮಾರ್ ಅಲಂಕೃತ್ ಬಾಂಬ್ ಬ್ಲಾಸ್ಟ್‌ನ ಮೊದಲ ವಿಡಿಯೋ ಹಂಚಿಕೊಂಡಿದ್ದರು.

RELATED ARTICLES

Related Articles

TRENDING ARTICLES