Tuesday, May 21, 2024

ಅತ್ತೆಯ ರುಂಡ ಮುಂಡ ಬೇರ್ಪಡಿಸಿದ ಸೋದರಳಿಯ!

ಆನೇಕಲ್​​: ತಾಲೂಕಿನ ಬಿಂಗಿಪುರದಲ್ಲಿ ತಲೆ ಬುರೆಡೆ ದೊರೆತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಣಕ್ಕಾಗಿ ಅತ್ತೆ ಪ್ರಾಣವನ್ನೆ ಕಿರಾತಕ ಸೋದರಳಿಯ ತೆಗೆದಿದ್ದಾನೆ ಎಂಬ ಸ್ಪೋಟಕ ಮಾಹಿತಿ ಪೊಲೀಸರಿಗೆ ದೊರೆತಿದೆ.

ಕಳೆದ ವಾರ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಎಸ್. ಬಿಂಗಿಪುರದಲ್ಲಿ ತಲೆ ಬುರುಡೆ ದೊರೆತಿತ್ತು. ಇದಕ್ಕೂ ಮುನ್ನವೇ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಲಾಗಿತ್ತು. ಮೃತ ಮಹಿಳೆ ಎಲೆಕ್ಟ್ರಾನಿಕ್ ಸಿಟಿ ದೊಡ್ಡ ತೋಗೂರು ವಾಸಿಯಾಗಿದ್ದು, ಸೋದರಳಿಯ ಜಶ್ವಂತ್ ಸ್ವಂತ ಅತ್ತೆಯನ್ನೆ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈಕಾರ ಹಾಕಿದವರು ಯಾರೇ ಆದರೂ ದೇಶದ್ರೋಶಹಿಗಳು: ಸಚಿವ ಜಮೀರ್​ ಅಹ್ಮದ್​

ಅತ್ತೆ ಸುಕನ್ಯಾ ಹಾಗು ನರಸಿಂಹ ರೆಡ್ಡಿ ದಂಪತಿ, ಅಪ್ಪ ಅಮ್ಮ ಇಲ್ಲದ ಜಶ್ವಂತ್​​ನನ್ನು ಓದಿಸುತ್ತಿದ್ದರು. ಅತ್ತೆಗೆ ಹಣ ಕೊಡುವಂತೆ ಜಶ್ವಂತ್ ಒತ್ತಾಯಿಸಿದ್ದಾನೆ. ಕೊಡದಿದ್ದಾಗ ಆಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತ ದೇಹ ಸುಟ್ಟುಹಾಕಿ ತಲೆಯನ್ನು ನಿರ್ಜನ ಪ್ರದೇಶದಲ್ಲಿ ಜಶ್ವಂತ್ ಬಿಸಾಡಿದ್ದಾನೆ.

ಪೋಲೀಸರ ತನಿಕೆ ಚುರುಕುಗೊಳಿಸಿದ ನಂತರ ಜಶ್ವಂತ್ ಅಸಲಿ ವಿಷಯ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES