ಬೆಂಗಳೂರು : ಇಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಕಾಂಗ್ರೆಸ್ನ ಚುನಾವಣಾ ಏಜೆಂಟ್ ಆಗಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಮೂವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪೋಲಿಂಗ್ ಬೂತ್ ಏಜೆಂಟ್ಗಳಿಗೆ ಕಾಂಗ್ರೆಸ್ ನಾಯಕರು ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್ನ 3 ಅಭ್ಯರ್ಥಿಗಳಿಗೆ ತಲಾ ಒಬ್ಬೊಬ್ಬರಿಗೆ ಓರ್ವ ಪೋಲಿಂಗ್ ಬೂತ್ ಏಜೆಂಟ್ ನೇಮಕ ಮಾಡಲಾಗಿದೆ.
ಇದನ್ನೂ ಓದಿ: KAS ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಜಯ್ ಮಕೇನ್ಗೆ ಪೋಲಿಂಗ್ ಏಜೆಂಟ್ ಆಗಿ ರಿಜ್ವಾನ್ ಅರ್ಷದ್ ಅವರನ್ನು ನೇಮಿಸಲಾಗಿದೆ. ಸೈಯದ್ ಹುಸೇನ್ಗೆ ಪೊಲಿಂಗ್ ಏಜೆಂಟ್ ಆಗಿ ಯು.ಬಿ.ವೆಂಕಟೇಶ್. ಇನ್ನು ಜಿ.ಸಿ.ಚಂದ್ರಶೇಖರ್ಗೆ ಪೊಲಿಂಗ್ ಏಜೆಂಟ್ ಆಗಿ ನಾರಾಯಣಸ್ವಾಮಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.