ಚಿತ್ರದುರ್ಗ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸದಾಶಿವ ಆಯೋಗವನ್ನು ಶೀಘ್ರ ಜಾರಿಗೆ ತರುವಂತೆ ಚಿತ್ರದುರ್ಗದಲ್ಲಿ ಕೋಡಿಹಳ್ಳಿ ಆದಿ ಜಾಂಬವ ಮಠದ ಷಡಾಕ್ಷರಿ ಮುನಿ ಶ್ರೀಗಳು ಒತ್ತಾಯಿಸಿದ್ದಾರೆ.
ಈ ಕುರಿತು ಮಾದ್ಯಮದೊಂದಿಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ಪಕ್ಷ ಎಲೆಕ್ಷನ್ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ಒಳ ಮೀಸಲಾತಿ ಜಾರಿಗೆ ತರುತ್ತೇವೆ ಎಂದಿದ್ದರು. ಚಿತ್ರದುರ್ಗದಲ್ಲಿ ನಡೆದ SC- ST ಸಮಾವೇಶದಲ್ಲಿ ಕೂಡಾ ಭರವಸೆ ನೀಡಿದ್ದರು. ಆದರೆ, ಮೊದಲ ಅಧಿವೇಶನದಲ್ಲಿ ಜಾರಿ ಕೂಡಾ ಮಾಡಲಿಲ್ಲ. ನಮ್ಮ ಸಮಾಜಕ್ಕೆ ಅನ್ಯಾಯ ಆಗುತ್ತಿದೆ, ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗವನ್ನು ಮಂಡಿಸಬೇಕು
ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿ ಅದರ ಸಾಧಕ ಭಾದಕಗಳನ್ನು ಚರ್ಚಿಸಿ ಆ ವರದಿಯನ್ನು ಯಾತವತ್ತಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಪಾರ್ಕಿಂಗ್ ನಿಷೇಧ!
30 ವರ್ಷಗಳಿಂದ ಸಮುದಾಯ ಹೋರಾಟ ಮಾಡುತ್ತಿದೆ. ಅಧಿವೇಶನದಲ್ಲಿ ಮಂಡಿಸಿ ಚರ್ಚಿಸಿ ಕೇಂದ್ರಕ್ಕೆ ಕಳಿಸಿದಾಗ ಮಾತ್ರ ಅದು ತಾರ್ಕಿಕ ಅಂತ್ಯ ಕಾಣುತ್ತದೆ. ಸಚಿವ ಸಂಪುಟದಲ್ಲಿ ಇಬ್ಬರು ನಮ್ಮ ಸಮಾಜ ಪ್ರತಿನಿಧಿಸಿದ್ದಾರೆ. ಸಮಾಜಕ್ಕೆ ನ್ಯಾಯ ಕೊಡುತ್ತೇವೆ ಎಂದು ಕೂಡಾ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ಯಾವುದೇ ವಿಷಯಕ್ಕೆ ಪರ ವಿರೋಧ ಇರುತ್ತದೆ. ನಮ್ಮ ಹಕ್ಕನ್ನ ನಾವು ಕೇಳುತ್ತಿದ್ದೇವೆ ಬಡತನ, ಹಸಿವು, ದೌರ್ಜನ್ಯಕ್ಕೆ ಒಳಗಾಗಿ ಹಿಂದುಳಿದಿದ್ದಾರೆ ಅವರನ್ನ ಕೈಹಿಡಿದು ಎತ್ತುಬೇಕಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂದು ಆಸಕ್ತಿ ಇದೆ ಆಗಾಗಿ ಅವರು ಮಾಡಿದ್ದು ಸರಿಯಾದ ಕ್ರಮವಾಗಿದೆ.
ಆದಷ್ಟು ಬೇಗ ಚರ್ಚೆ ಮಾಡಿ ಕಳಿಸಿ ಎಂದು ನಾವು ಮನವಿ ಮಾಡುತ್ತೇವೆ ಎಂದರು.