Wednesday, May 8, 2024

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಸಂಸದ ಸ್ಥಾನದಿಂದ ಅನರ್ಹ:  ಹೈಕೋರ್ಟ್​ ತೀರ್ಪು

ಬೆಂಗಳೂರು : ಸಂಸದ ಪ್ರಜ್ವಲ್​ ರೇವಣ್ಣ ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೊರ್ಟ್​ ತೀರ್ಪು ನೀಡಿ ಆದೇಶಿಸಿದೆ.

ರಾಜ್ಯ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ಆರೋಪದಡಿ ಪ್ರಜ್ವಲ್​ ರೇವಣ್ಣ ಅವರನ್ನು ಇಂದು ಹೈಕೋರ್ಟ್​​ ಸಂಸದ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಿದೆ.

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ವಿಚಾರವನ್ನು ಪ್ರಶ್ನಿಸಿ ಎ. ಮಂಜು ಮತ್ತು ದೇವರಾಜೇಗೌಡ​  ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಕುರಿತು ಹೈಕೋರ್ಟ್​ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಪೀಠ ಪ್ರಜ್ವಲ್​ ರೇವಣ್ಣನ ಸಂಸದ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನಿಡಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಬರಲಿದ್ದ 2024 ರ ಲೋಕಸಭಾ ಚುನಾವಣೆ ತಯಾರಿ ನಡೆಸಿದ್ದ ಪ್ರಜ್ವಲ್​ ರೇವಣ್ಣ ಗೆ ಹೈಕೋರ್ಟ್​ ತೀರ್ಪು ಬಾರಿ ಆಘಾತ ಉಂಟುಮಾಡಿದೆ.

RELATED ARTICLES

Related Articles

TRENDING ARTICLES