ಬೆಂಗಳೂರು : ಏನು ಸಿಗದೇ ಇದ್ದಾಗ, ಏನು ಅಸ್ತ್ರ ಇಲ್ಲದೇ ಇದ್ದಾಗ ಹೀಗೆ ಮಾಡ್ತಾರೆ. ಈ CD, ಪೆನ್ಡ್ರೈವ್ ಬಿಡೋದು ಅತ್ಯಂತ ನೀಚ ಕೆಲಸ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಜವಾದ ಕೊಳಕು ಯಾರು ಎಂದೇ ಗೊತ್ತಾಗ್ತಾ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜಕೀಯದಲ್ಲಿ ಕೂಡ ಇಂತಹ ಸೀರಿಯಸ್ ಕೇಸ್ ದಿಕ್ಕು ತಪ್ಪುತ್ತದೆ. ಒಮ್ಮೊಮ್ಮೆ ಸಣ್ಣ ಕೇಸ್ ಬಹಳ ಸೀರಿಯಸ್ ಆಗುತ್ತದೆ. ಸಮಾಜವನ್ನೇ ಬ್ಲಾಸ್ಟ್ ಮಾಡುವ ಪ್ರಯತ್ನ ಇದು. CD ಹಂಚಿಕೆ ಮಾಡಿದಾಗ ಕ್ರಮ ಆಗಬೇಕಿತ್ತು ಎಂದು ಹೇಳಿದ್ದಾರೆ.
ಈ ಪ್ರಕರಣದಿಂದ ಡ್ಯಾಮೇಜ್ ಆಗಿರುವುದು ನಿಜ. ಆದರೆ, ಇವತ್ತು ಅದು ಬೌನ್ಸ್ ಬ್ಯಾಕ್ ಆಗಿದೆ. ಅವರೇ ಬ್ಯಾಟಿಂಗ್ ಶುರು ಮಾಡಿದವರು. ನಾವು ಫೀಲ್ಡ್ ಮಾಡಿದ್ದೆವು, ಈಗ ಕ್ಯಾಚ್ ಆಗಿದೆ. ಹಾಗಾಗಿ, ಅವರಿಗೆ ಈಗ ಅರ್ಥ ಆಗಿದೆ. ನಿಜವಾದ ಕೊಳಕು ಯಾರು ಎಂದೇ ಗೊತ್ತಾಗ್ತಾ ಇಲ್ಲ ಎಂದು ತಿಳಿಸಿದ್ದಾರೆ.
ನಾಯಕತ್ವ ವಹಿಸಿಕೊಳ್ಳಲು ಈ ಚಿಲ್ಲರೆ ಕೆಲಸ
ಒಕ್ಕಲಿಗ ನಾಯಕತ್ವಕ್ಕಾಗಿ ಈ ಡ್ರಾಮಾ ನಡೆಯುತ್ತಿದ್ಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಬಹಳ ವರ್ಷಗಳಿಂದ ಒಕ್ಕಲಿಗ ನಾಯಕತ್ವಕ್ಕಾಗಿ ಸಂಘರ್ಷ ನಡೆಯುತ್ತಿದೆ. ಒಕ್ಕಲಿಗ ನಾಯಕತ್ವ ವಹಿಸಿಕೊಳ್ಳಲು ಈ ಚಿಲ್ಲರೆ ಕೆಲಸ ಮಾಡಿದ್ರೆ ಆಗಲ್ಲ. ಪೆನ್ಡ್ರೈವ್, CD ಬಿಡುವ ಇಂಥ ನೀಚ ಕೆಲಸದಿಂದ ಯಾರೂ ಒಕ್ಕಲಿಗ ನಾಯಕರಾಗಲ್ಲ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಸದಾನಂದ ಗೌಡ ಚಾಟಿ ಬೀಸಿದ್ದಾರೆ.