ಮೈಸೂರು: ಮೈಸೂರಿನಲ್ಲಿ ಕನಕದಾಸ ಜಯಂತಿಯನ್ನು ಆಚರಣೆ ವೇಳೆ ಮಾತನಾಡಿದ ಎಚ್ ವಿಶ್ವನಾಥ್ ರವರು, ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಯನ್ನು ನರೇಂದ್ರ ಮೋದಿ ಮಾಡುತ್ತಿರುವುದು ಸಂತೋಷವಾಗಿದೆ.
ಇನ್ನು ಜಾರಕಿಹೊಳಿ ಮಾತಿಗೆ ಅವರೇ ಕ್ಷಮೆ ಕೇಳಿದ್ದಾರೆ ಅದರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ. ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಮನಸ್ಸಿನ ಮಾತನ್ನು ಜಾರಕಿಯವರು ಹೇಳಿದ್ದಾರೆ. ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿ ಅವರ ವ್ಯಕ್ತಿತ್ವ ಮತ್ತು ತೂಕ ಅವರದ್ದೆ ಇದೆ.
ಪ್ರತಾಪ್ ಸಿಂಹ ಅವರ ಮಾತಿನಿಂದ ಅವರ ವ್ಯಕ್ತಿತ್ವಕ್ಕೆ ಏನು ಕುಂದು ಬರುವುದಿಲ್ಲ. ಜಾರಕಿಹೊಳಿಯವರ ಮಾತು ಅವರದ್ದು, ಅದಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ. ಮೈಸೂರಿನ ಕನಕದಾಸ ಜಯಂತಿ ಮತ್ತು ಕೆಂಪೇಗೌಡ ಜಯಂತಿಯ ಆಚರಣೆ ಸಂದರ್ಭದಲ್ಲಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.