Thursday, May 9, 2024

ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್ ‘ಲಾವ’.. ಡೈರೆಕ್ಟರ್ ಯಾರು ಗೊತ್ತಾ..?

ಆಲ್ ಇಂಡಿಯಾ ಕಟೌಟ್ ಕಿಚ್ಚ, ವಿಕ್ರಾಂತ್ ರೋಣನಾಗಿ ಆರ್ಭಟಿಸಿದ ಬಳಿಕ ಅವ್ರ ನೆಕ್ಸ್ಟ್ ಪ್ರಾಜೆಕ್ಟ್ ಯಾವುದಾಗಲಿದೆ ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಲ್ಲ ರಂಗ ಭಾಷ, ಅಶ್ವತ್ಥಾಮ ಬಿಟ್ಟು ಮತ್ತೊಂದು ಮೆಗಾ ಪ್ರಾಜೆಕ್ಟ್​ಗೆ ಕೈ ಹಾಕಿದ್ದಾರೆ ಮಾಣಿಕ್ಯ. ಲಾವಾರಸದಂತೆ ಉಕ್ಕಲಿರೋ ಸುದೀಪ್, ಯಾರ ಌಕ್ಷನ್ ಕಟ್​ನಲ್ಲಿ ವರ್ಕ್​ ಮಾಡ್ತಾರೆ ಅನ್ನೋ ಎಕ್ಸ್​ಕ್ಲೂಸಿವ್ ಸ್ಟೋರಿ ನಿಮಗಾಗಿ ಕಾಯ್ತಿದೆ.

  • ಅಶ್ವತ್ಥಾಮ, ಬಿಲ್ಲ ರಂಗ ಬಾಷಗೂ ಮುನ್ನ ಮೆಗಾ ವೆಂಚರ್
  • ಶಿಷ್ಯ ನಂದಕಿಶೋರ್ ಌಕ್ಷನ್ ಕಟ್​ನಲ್ಲಿ ರನ್ನನ ಮಾಸ್ ಖದರ್
  • ವಿಕ್ರಾಂತ್ ರೋಣ ಬಳಿಕ ಎಚ್ಚೆತ್ತುಕೊಂಡ ಕಿಚ್ಚ ಸುದೀಪ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವ್ರಿಗೆ ಬರೋಬ್ಬರಿ ಐದು ವರ್ಷದಿಂದ ನಿರೀಕ್ಷಿತ ಗೆಲುವು ಸಿಕ್ಕಿಲ್ಲ. ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ವರ್ಚಸ್ಸು ಇರೋ ಅಂತಹ ಸೂಪರ್ ಸ್ಟಾರ್​ಗೆ ಹೀಗೆ ಐದಾರು ವರ್ಷಗಳಾದ್ರೂ ಹಿಟ್ ಸಿನಿಮಾ ಸಿಗದೇ ಇರೋದು ನಿಜಕ್ಕೂ ಅವ್ರ ಸ್ಟಾರ್​ಡಮ್ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ಬಹುಶಃ 2017ರ ಹೆಬ್ಬುಲಿ ನಂತ್ರ ಮತ್ಯಾವ ಚಿತ್ರ ಕೂಡ ಬಾಕ್ಸ್ ಆಫೀಸ್ ಸದ್ದು ಮಾಡಲಿಲ್ಲ, ನೋಡುಗರಿಂದ ಶಿಳ್ಳೆ- ಚಪ್ಪಾಳೆ ಗಿಟ್ಟಿಸಲಿಲ್ಲ.

ಅಂಬಿ ನಿಂಗ್ ವಯಸ್ಸಾಯ್ತೋ, ದಿ ವಿಲನ್, ಪೈಲ್ವಾನ್, ಸೈರಾ ನರಸಿಂಹ ರೆಡ್ಡಿ, ದಬಾಂಗ್-3, ಕೋಟಿಗೊಬ್ಬ-3 ಹೀಗೆ ಸಾಲು ಸಾಲು ಸಿನಿಮಾಗಳು ಸೋತಿದ್ದಲ್ಲದೆ, ಅವ್ರ ಫ್ಯಾನ್ಸ್​ನ ಅತೀವ ನಿರಾಸೆಗೊಳಿಸಿತ್ತು. ಇತ್ತೀಚೆಗೆ ತೆರೆಕಂಡ ವಿಕ್ರಾಂತ್ ರೋಣ, ಮೇಕಿಂಗ್ ಹಾಗೂ ಕಿಚ್ಚನ ಆ್ಯಕ್ಟಿಂಗ್ ಖದರ್​ನಿಂದ ಸೌಂಡ್ ಮಾಡಿತಾದ್ರೂ, ಕಥೆಯಲ್ಲಿ ಗಟ್ಟಿತನ ಇಲ್ಲದ ಕಾರಣ ಅಷ್ಟಾಗಿ ರುಚಿಸಲಿಲ್ಲ.

ಆದ್ರೆ ಅದೇ ಅನೂಪ್ ಭಂಡಾರಿ ಜೊತೆ ಜನ ನಿರೀಕ್ಷಿಸೋ ಅಂತಹ ಸಿನಿಮಾ ಮಾಡಿ ತೋರಿಸ್ತೀನಿ ಅಂತ ಕಿಚ್ಚ ಬಹಿರಂಗವಾಗಿ ಹೇಳಿಕೊಂಡಿದ್ರು. ಅದಕ್ಕೆ ಪೂರಕವಾಗಿ ಬಿಲ್ಲ ರಂಗ ಬಾಷ ಹಾಗೂ ಅಶ್ವತ್ಥಾಮ ಅನ್ನೋ ಎರಡೆರಡು ಕಥೆಗಳನ್ನ ಸಿದ್ದಪಡಿಸಿಕೊಂಡು ಕಿಚ್ಚನ ಡೇಟ್ಸ್​ಗೆ ತುದಿಗಾಲಲ್ಲಿ ನಿಂತಿದ್ರು ವಿಕ್ರಾಂತ್ ರೋಣ ಕ್ಯಾಪ್ಟನ್ ಅನೂಪ್ ಭಂಡಾರಿ. ಆದ್ರೀಗ ಅವೆರಡೂ ಪ್ರಾಜೆಕ್ಟ್ಸ್​ನ ಪಕ್ಕಕ್ಕಿಟ್ಟು, ಶಿಷ್ಯ ನಂದಕಿಶೋರ್ ಜೊತೆ ನ್ಯೂ ವೆಂಚರ್​ಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ಕಿಚ್ಚ.

ಯೆಸ್.. ಸಿನಿಮಾಗೆ ಈಗಾಗ್ಲೇ ಲಾವ ಅನ್ನೋ ಟೈಟಲ್ ಫೈನಲ್ ಆಗಿದ್ದು, ಲಾವಾರಸದಂತೆ ಕಿಚ್ಚ ಉಕ್ಕಿ ಹರಿಯೋ ಹೈ ವೋಲ್ಟೇಜ್ ಌಕ್ಷನ್ ಸಿನಿಮಾ ಮಾಡಲಿದ್ದಾರಂತೆ. ಔಟ್ ಅಂಡ್ ಔಟ್ ಮಾಸ್ ಟೈಟಲ್ ಆಗಿರೋ ಲಾವ, ಕಥೆಯಿಂದಲೂ ಥ್ರಿಲ್ ಕೊಡಲಿದೆಯಂತೆ. ಮೇಕಿಂಗ್​ನಲ್ಲಿ ನಿರ್ದೇಶಕ ನಂದಕಿಶೋರ್ ಒಂಥರಾ ಮಾಸ್ಟರ್. ಇನ್ನು ಕಿಚ್ಚನ ಅಭಿನಯ ಪ್ರೇಕ್ಷಕರನ್ನ ಕಿಕ್ಕೇರಿಸಲಿದೆ.

ಅಂದಹಾಗೆ ನಿರ್ದೇಶಕ ನಂದಕಿಶೋರ್ ನಟ ಕಿಚ್ಚ ಸುದೀಪ್ ಅವ್ರ ಗರಡಿಯಿಂದಲೇ ಹೊರಬಂದ ಪ್ರತಿಭೆ. ಈ ಹಿಂದೆ ರನ್ನ, ಮುಕುಂದ ಮುರಾರಿ ಅನ್ನೋ ಎರಡು ಸಿನಿಮಾಗಳನ್ನ ಸುದೀಪ್ ಅವ್ರಿಗೆ ಡೈರೆಕ್ಟ್ ಮಾಡಿ, ತನ್ನ ನಿರ್ದೇಶನಾ ಕೌಶಲ್ಯ ಮೆರೆದಿದ್ರು ನಂದು. ಹಾಗಾಗಿ ಇದು ಇವ್ರ ಹ್ಯಾಟ್ರಿಕ್ ಕಾಂಬೋ ಆಗಲಿದ್ದು, ಬರೋಬ್ಬರಿ ಆರು ವರ್ಷದ ನಂತ್ರ ಒಂದಾಗ್ತಿರೋ ನಂದ ಕಿಶೋರ್- ಕಿಚ್ಚ ಈ ಬಾರಿ ದೊಡ್ಡ ಮಟ್ಟಕ್ಕೆ ಮ್ಯಾಜಿಕ್ ಮಾಡಲಿದ್ದಾರೆ ಅನ್ನೋದು ಸದ್ಯದ ಟಾಕ್. ಇದು ಪವರ್ ಟಿವಿಯ ಎಕ್ಸ್​ಕ್ಲೂಸಿವ್ ರಿಪೋರ್ಟ್​ ಆಗಿದ್ದು, ಸದ್ಯದಲ್ಲೇ ಈ ಪ್ರಾಜೆಕ್ಟ್ ಅಫಿಶಿಯಲಿ ಅನೌನ್ಸ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES