Thursday, May 9, 2024

ಪ್ರೀತಿಯ ನಾಟಕವಾಡಿ ಯುವಕನ ಕೊಲೆ

ಕಲಬುರಗಿ : ಮಿಸ್ ಕಾಲ್‌ನಿಂದ ಅರಳಿದ ಲವ್… ಆ ಲವ್ ಹಿಂದಿತ್ತು ಭಯಾನಕ ಸ್ಕೆಚ್​​​.. ಪ್ರೀತಿಯ ನಾಟಕವಾಡಿದ ಆಕೆ, ಆತನನ್ನ ಕೊಲ್ಲೋದ್ದಕ್ಕೆ ಸುಪಾರಿ ಪಡೆದಿದ್ದಳು. ಮೂರು ದಿನದಲ್ಲಿ ಹುಟ್ಟಿದ ಪ್ರೀತಿ 15 ದಿನಗಳಲ್ಲಿ ಕೊಲೆಯಲ್ಲಿ ದುರಂತ ಅಂತ್ಯವಾಗಿದೆ.

ಯುವಕ ಎಷ್ಟೇ ಕಾಡಿ ಬೇಡಿಕೊಂಡ್ರು ಕೂಡ ಬಿಡದ ಹಂತಕರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಂದೇ ಬಿಟ್ಟಿದ್ದಾರೆ. ಕೊಲೆಯ ಲೈವ್ ವಿಡಿಯೋವನ್ನ ಆ ಯುವಕನ ಪ್ರೇಯಸಿಯೇ ವಿಡಿಯೋ ಮಾಡಿರೋದು ಇದೀಗ ವೈರಲ್ ಆಗಿದೆ.

ಅಂದಹಾಗೆ ಜೂನ್ 24 ರಂದು ಕಲಬುರಗಿಯ ವಾಜಪೇಯಿ ಬಡಾವಣೆ ಬಳಿ ರಸ್ತೆ ಪಕ್ಕದಲ್ಲಿಯೇ ಯುವಕನ ಬರ್ಬರ ಕೊಲೆಯಾಗಿತ್ತು. ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಕೊಲೆಯ ರಹಸ್ಯವನ್ನು ಬೇಧಿಸಿದ್ದಾರೆ. ದಯಾನಂದ್ ಎಂಬಾತನೇ ಕೊಲೆಯಾದ ಯುವಕ. ಈತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ನಿವಾಸಿ. ದುಬೈನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದ ದಯಾನಂದ್, ನಾಲ್ಕೈದು ತಿಂಗಳ ಹಿಂದಷ್ಟೇ ತನ್ನೂರಿಗೆ ಬಂದಿದ್ದ. ಮತ್ತೆ ದುಬೈಗೆ ಹೋಗಲು ಸಿದ್ದತೆ ನಡೆಸಿದ್ದ. ಜೂನ್ 24 ರಂದು ಸ್ವಲ್ಪ ಕೆಲಸವಿದ್ದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದಿದ್ದ. ಆದ್ರೆ ಅಂದೇ ದಯಾನಂದ್ ನಿಗೂಢವಾಗಿ ಕೊಲೆಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಿಕಾ ಎಂಬ ಮಹಿಳೆ ಸೇರಿ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಯಾನಂದ್‌ಗೆ ಮದುವೆಯಾಗಿರಲಿಲ್ಲ. ಯಾರ ಜೊತೆ ಹಣಕಾಸಿನ ವ್ಯವಹಾರವು ಇರಲಿಲ್ಲ. ಆದ್ರು ಕೂಡಾ ದಯಾನಂದ್ ಕೊಲೆಗೆ ಕಾರಣವಾಗಿದ್ದು, ಮಹಿಳೆ. ಕಲಬುರಗಿ ನಗರದ ಬಸವೇಶ್ವರ ಕಾಲೋನಿಯ ನಿವಾಸಿಯಾಗಿರುವ ಅಂಬಿಕಾ, ಯಾದಗಿರಿಯ ಕೊಡೆಕಲ್​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿ ಅಂತ ಕೆಲಸ ಮಾಡುತ್ತಿದ್ದಳು. ಅಂಬಿಕಾಗೆ ಮದುವೆಯಾಗಿದ್ದು, ಓರ್ವ ಮಗಳು ಕೂಡಾ ಇದ್ದಾಳೆ. ಆದ್ರೆ ಈ ಅಂಬಿಕಾ, 15 ದಿನದ ಹಿಂದಷ್ಟೇ ದಯಾನಂದ್​​ನ ನಂಬರ್ ಪಡೆದು, ಆತನ ಜೊತೆ ಪ್ರೀತಿಯ ನಾಟಕವಾಡಿದ್ದಳು. ಮಿಸ್ ಕಾಲ್ ನಿಂದ ಆರಂಭವಾಗಿದ್ದ ಇವರ ಮಾತುಕತೆ ನಂತರ ಸ್ನೇಹಕ್ಕೆ ತಿರುಗಿತ್ತು. ಆದ್ರೆ ಇದೇ ಅಂಬಿಕಾ, ಜೂನ್ 24 ರಂದು ದಯಾನಂದ್ ಗೆ ಕಲಬುರಗಿಗೆ ಬರುವಂತೆ ಹೇಳಿ, ಕೊಲೆ ಮಾಡಿಸಿದ್ದಾಳೆ.

ಅಂಬಿಕಾ ದಯಾನಂದ್​​ನನ್ನ ಕೊಲೆ ಮಾಡಿಸೋದಕ್ಕೆ ಕಾರಣ ತನ್ನ ಮತ್ತೊಬ್ಬ ಫೇಸ್ ಬುಕ್ ಪ್ರಿಯಕರನ ಸಲುವಾಗಿ. ಹೌದು ಅಂಬಿಕಾಳ ಫೇಸ್ ಬುಕ್ ಪ್ರಿಯಕರ ಇದೆ ದಯಾನಂದನ ಸಹೋದರ ಸಂಬಂಧಿಯಾದ ಸುನೀಲ್​​. ದಯಾನಂದ್ ಸುನೀಲ್​​ ಹೆಂಡತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ. ಹೀಗಾಗಿ ದಯಾನಂದ್​ನನ್ನ ಕೊಲೆ ಮಾಡೋದಕ್ಕೆ ಅಂತಾನೆ ತನ್ನ ಪ್ರೇಯಸಿಯಾದ ಅಂಬಿಕಾಳಿಗೆ ಸುಪಾರಿ ಕೊಟ್ಟಿದ್ದ. ಸುಪಾರಿ ಪಡೆದ ಅಂಬಿಕಾ ದಯಾನಂದ್ ಜೊತೆ ಪ್ರೀತಿಯ ನಾಟಕವಾಡಿ ಕೊಲೆ ಮಾಡಿ ಇದೀಗ ಅಂದರ್ ಆಗಿದ್ದಾಳೆ.

ಅಂಬಿಕಾ ದಯಾನಂದ್​​ನನ್ನು ಕೊಲೆ ಮಾಡೋದಕ್ಕೆ 3 ಲಕ್ಷ ಸುಪಾರಿ ಪಡೆದಿದ್ದಳು. ಒಂದೂವರೆ ಲಕ್ಷ ಅಡ್ವಾನ್ಸ್ ಪಡೆದ ಅಂಬಿಕಾ ಆಂಡ್ ಗ್ಯಾಂಗ್ ದಯಾನಂದ್​​ನನ್ನ ಕೊಲೆ ಮಾಡಿದೆ. ಸುಪಾರಿ ನೀಡಿದ ಹಂತಕ ಸುನೀಲ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದ್ರೆ ಮೋಸದ ಪ್ರೀತಿಯ ಬಲೆಗೆ ಬಿದ್ದ ದಯಾನಂದ್ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರ್ದೈವದ ಸಂಗತಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES