ಬೆಂಗಳೂರು : ಹೊಸ ವರ್ಷದ ಮೊದಲ ದಿನ ಮತ್ತು ಧರ್ನುಮಾಸದ ಹಿನ್ನೆಲೆ ಇಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸುತ್ತಿದ್ದಾರೆ. ಹಾಗೂ ಇಂದು ಬೆಳ್ಳಗ್ಗೆಯಿಂದಲೇ ದೇಗುಲಗಳಿಗೆ ಜನರು ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡು ವರ್ಷದ ಮೊದಲ ದಿನವನ್ನು ಶುಭವಾಗಿ ಆರಂಭಿಸುತ್ತಿದ್ದಾರೆ.
ಅಲ್ಲದೇ, ಕೊರೋನಾ ನಡುವೆಯೂ ಹಲವು ಕಡೆಗಳಲ್ಲಿ ಜನರು ಹೊಸ ವರ್ಷವನ್ನು ಆಚರಿಸಿದ್ದಲ್ಲದೇ, ನಗರದ ಪ್ರತಿಷ್ಠಿತ ದೇವಾಲಯಗಳಾದ ಕಾಡು ಮಲ್ಲೇಶ್ವರ, ಬನಶಂಕರಿ, ಅಣ್ಣಮ್ಮ, ಇನ್ನು ಮುಂತಾದ ದೇವಸ್ಥಾನಗಳಲ್ಲಿ ಭಕ್ತರು ದಂಡೆ ದೇವರ ದರ್ಶನ ಪಡೆಯಲು ತುಂಬಿದ್ದರು.
ಬೆಳಗಿನ ಜಾವದಿಂದಲೇ ಸಾಲು ಗಟ್ಟಿನಿಂತ ಭಕ್ತರು, ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಕೂಡ ಸಲ್ಲಿಸಿದರು.