ಚಿಕ್ಕಮಗಳೂರು : ಫುಟ್ ಪಾತ್ ತೆರವು ಕಾರ್ಯಚರಣೆ ವೇಳೆ ನಗರಸಭೆ ಸಿಬ್ಬಂದಿ ಅನುಚಿತ ವರ್ತನೆ ತೋರಿದಾರೆ, ಅಂತಾ ಆರೋಪಿಸಿ ಸಾರ್ವಜನಿಕರು, ನಗರಸಭೆ ಸಿಬ್ಬಂದಿ ಹಾಗೂ ಆಯುಕ್ತರನ್ನ ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ ಎಂ.ಜಿ ರಸ್ತೆಯಲ್ಲಿ ಫುಟ್ಪಾತ್ ತೆರವು ಕಾರ್ಯಚರಣೆ ವೇಳೆ ನಗರಸಭೆ ಸಿಬ್ಬಂದಿಗಳು ಅವಾಚ್ಯ ಶಬ್ದಗಳಿಂದ ಮಹಿಳೆಯರಿಗೆ ನಿಂದಿಸಿದರು ಎಂದು ಆರೋಪಿಸಿ ಸಾರ್ವಜನಿಕರು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಮಾತಿನ ಚಕಮಕಿ ಆಗದಂತೆ ತಡೆದಿದ್ದಾರೆ. ಆ ಬಳಿಕ ಪೊಲೀಸರು ಮಧ್ಯಪ್ರವೇಶದಿಂದ ತೆರವು ಕಾರ್ಯಚರಣೆ ನಡೆಯಿತು…