ಮಂಡ್ಯ : ಈ ಹಿಂದೆ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೆದಲ್ಲಿ ನಡೆದ ಪ್ರತಿ ಕ್ಷೇತ್ರ ಗೆದ್ದಿದೆ. ಅವರ ಕಾಲ್ಗುಣ ಶಕ್ತಿ ಶಾಲಿಯಾಗಿದೆ. ಕಷ್ಟ ಸುಖ ಕೇಳಲು ಹೆಜ್ಜೆ ಹಾಕಿದ್ರು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಮಂಡ್ಯ ಗೆದ್ದರೇ ಇಂಡಿಯಾ ಗೆದ್ದಂಗೆ. ವಿರೋಧ ಪಕ್ಷದ ಅಭ್ಯರ್ಥಿ ಪರ ಮಾತನಾಡಲ್ಲ ಎಂದು ಕುಟುಕಿದರು.
ಮಂಡ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ಯಾವುದೇ ಕೊಡುಗೆ ಕೊಟ್ಟಿಲ್ಲ. ಅವರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಲ್ಲ. ದೇವೇಗೌಡರ ಕೊಡುಗೆ ಕೂಡ ಇಲ್ಲ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಮೇಕೆದಾಟು ಯೋಜನೆ ಅವಕಾಶ ಕೊಡಲಿಲ್ಲ. ನಮ್ಮ ಅವಧಿಯಲ್ಲೇ ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ ಎಂದು ತಿಳಿಸಿದರು.
ಕಿವಿಗೆ ಹೂವು ಇಡಲು ಬಂದಿದ್ದಾರೆ
ರಾಹುಲ್ ಗಾಂಧಿ ಈ ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತ ಹೇಳಿದ್ರು. ಇದೀಗ ಎ ಟೀಂ ಆಗಿದ್ದಾರೆ. ಚಂದ್ರು ಅಲ್ಲ ಅಭ್ಯರ್ಥಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅಭ್ಯರ್ಥಿ. ನಿನ್ನನ್ನ ಸಿಎಂ ಮಾಡಿದ ಜನರು ಅಭ್ಯರ್ಥಿ ಇರಲಿಲ್ಲ. ಇದೀಗ ಮಂಡ್ಯ ಜನರ ಕಿವಿಗೆ ಹೂವು ಇಡಲು ಬಂದಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ತಾತ್ಕಾಲಿಕ ಎನ್ನುತ್ತಾರೆ
ತಾಯಂದಿರು ಕರ್ನಾಟಕದಿಂದಲೇ ಗೋ ಬ್ಯಾಕ್ ಮಾಡಿದ್ದಾರೆ. ತಾಯಂದಿರು ಧಿಕ್ಕಾರ ವ್ಯಕ್ತಪಡಿಸಿದ್ದಾರೆ. ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಗೆಲ್ಲುತ್ತೇವೆ. ನಮಗೆ ನಾಚಿಗೆ ಆಗುತ್ತಿದೆ. ಬಿ.ವೈ. ವಿಜಯೇಂದ್ರ ಹೇಳುತ್ತಾರೆ, ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ ಅನ್ನುತ್ತಾರೆ. ಮಿಸ್ಟರ್ ಯಡಿಯೂರಪ್ಪ, ವಿಜಯೇಂದ್ರ ಇದನ್ನ ಬದಲಾವಣೆ ಮಾಡಲು ಆಗಲ್ಲ ಎಂದು ಡಿ.ಕೆ. ಶಿವಕುಮಾರ್ ಚಾಟಿ ಬೀಸಿದರು.