ಪಿಂಚಣಿಗಾಗಿ ವೃದ್ಧೆಯೊಬ್ಬರು ಸಿಎಂ ಮತ್ತು ಸಚಿವರ ಕಾಲಿಗೆ ಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಪಾಂಡವಪುರದಲ್ಲಿ ಜೆಡಿಎಸ್ ಪ್ರಚಾರ ಸಭೆ ಬಳಿಕ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವ್ರು ಹೊರ ನಡೆಯುತ್ತಿರುವಾಗ ವೃದ್ಧೆಯೊಬ್ಬರು ಬಂದು ಕಾಲಿಗೆ ಬಿದ್ದಿದ್ದಾರೆ. ಕಾಲಿಗೆ ಬಿದ್ದ ವೃದ್ಧೆಯನ್ನು ಸಂತೈಸಿದ ಸಿಎಂ ಪಿಂಚಣಿ ಭರವಸೆ ನೀಡಿದ್ರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎಲೆಕ್ಷನ್ ಬಳಿಕ ಪಿಂಚಣಿ ಕೊಡಿಸೋದಾಗಿ ಸಚಿವ ಪುಟ್ಟರಾಜು ಹೇಳಿದ್ರು.