Wednesday, October 2, 2024

ಜಾಮೀನು ದೊರೆತ 10 ದಿನದ ಬಳಿಕ ಡಿ ಗ್ಯಾಂಗ್​ಗೆ ಬಿಡುಗಡೆ ಭಾಗ್ಯ

ತುಮಕೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ 3 ಆರೋಪಿಗಳಿಗೆ ಜಾಮೀನು ದೊರೆತಿದ್ದು. ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಮೂವರು ಆರೋಪಿಗಳು ರಿಲೀಸ್ ಆಗಿದ್ದಾರೆ. ಜಾಮೀನು ಸಿಕ್ಕಿ 10 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆದ ಮೂವರು ಆರೋಪಿಗಳು.

ಕಳೆದ ತಿಂಗಳ ಸೆಪ್ಟೆಂಬರ್ 23 ರಂದು ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು. ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ದೊರೆತಿದ್ದುಉಳಿದ ಆರೋಪಿಗಳಾದ ನಿಖಿಲ್ ನಾಯಕ್ ಹಾಗೂ ಕಾರ್ತಿಕ್ ಗೆ 57 ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

ಸತತ 9 ದಿನಗಳಿಂದ ಜಾಮೀನಿಗೆ ಶ್ಯೂರಿಟಿದಾರರು ಸಿಗದೆ ಪರದಾಡುತ್ತಿದ್ದ ಆರೋಪಿಗಳಿಗೆ ನೆನ್ನೆ (ಅ.01) ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿದ್ದು. ನಿನ್ನೆ ರಾತ್ರಿಯೇ ತುಮಕೂರು ಜೈಲಾದಿಕಾರಿಗೆ ಮೇಲ್ ಮೂಲಕ ಜಾಮೀನು ಆದೇಶ ಪ್ರತಿ ತಲುಪಿದ್ದು. ಇಂದು (ಅ.02) ಬೆಳಿಗ್ಗೆ ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳನ್ನು ಜೈಲಿನಿಂದ ರೀಲಿಸ್ ಮಾಡಲಾಗಿದೆ.

ಇವರು ನೇರವಾಗಿ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರದೆ ಇದ್ದರು. ಹಣ ಪಡೆದು ತಾವೇ ಕೊಲೆ ಮಾಡಿದ್ದೇವೆ ಎಂದು ಪೋಲಿಸರಿಗೆ ಶರಣಾಗಿದ್ದರು. ಇವರನ್ನು ಕೇವಲ ಸಾಕ್ಷನಾಶ ಪ್ರಕರಣದಲ್ಲಿ ಬಂಧಿಸಲಾಗಿತ್ತು.

 

RELATED ARTICLES

Related Articles

TRENDING ARTICLES