ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮತದಾನ ಪ್ರಕ್ರಿಯೆ ಆರಂಭವಾಗಿದೆ, ಬೆಂಗಳೂರಿನಲ್ಲಿ ಉತ್ತಮ ಪತಿಕ್ರಿಯೆ ವ್ಯಕ್ತವಾಗುತ್ತಿದೆ. ಮತದಾನ ಆರಂಭವಾಗುವ ಮೊದಲೇ ಹಲವು ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು 7 ಗಂಟೆಯ ನಂತರ ಮತದಾನ ಮಾಡಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಸುಧಾ ಮೂರ್ತಿ, ರಾಹುಲ್ ದ್ರಾವಿಡ್ ದಂಪತಿ, ಅನಿಲ್ ಕುಂಬ್ಳೆ ದಂಪತಿ, ನಟ ಸುದೀಪ್ ದಂಪತಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಈ ವೇಳೆ ಮಾತನಾಡಿದ ಸುಧಾಮೂರ್ತಿ, ಇವತ್ತು ನನಗೆ ವೈಯಕ್ತಿಕ ಕೆಲಸವಿದೆ. ಹೀಗಾಗಿ ಬೆಳಗ್ಗೆಯೇ ಮತದಾನ ಮಾಡಿದ್ದೇನೆ. ವಯಸ್ಸಾದವರು ಮತದಾನ ಮಾಡುತ್ತಾರೆ. ಆದರೆ ಯುವಕರು ಆಸಕ್ತಿ ತೋರಿಸುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದು ಮತದಾನ ಮಾಡಬೇಕು ಎಂದು ತಿಳಿಸಿದರು.
ಬೆಳಗ್ಗೆಯೇ ವಾಕಿಂಗ್ ಹೋಗುವ ವ್ಯಕ್ತಿಗಳು ನೇರವಾಗಿ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ದೃಶ್ಯ ಕಂಡು ಬಂತು.
#WATCH | Rahul Dravid casts his vote in Karnataka’s Bengaluru.#LokSabhaElections2024 pic.twitter.com/gZ6Ybairc1
— ANI (@ANI) April 26, 2024