Sunday, May 5, 2024

ಟಿಪ್ಪು ಜಯಂತಿ ಮಾಡಿದವರಿಗೆ ವೋಟು ಹಾಕಬೇಕೆ? : ಶಾಸಕ ಯತ್ನಾಳ್

ವಿಜಯಪುರ : ಮತಾಂಧ ಟಿಪ್ಪು ಜಯಂತಿ ಮಾಡಿದವರಿಗೆ ವೋಟು ಹಾಕಬೇಕೆ? ಎಂದು ಕಾಂಗ್ರಸ್​ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದೂ ಮತ್ತು ಕನ್ನಡ ಸಂಸ್ಕೃತಿಯನ್ನು ನಾಶ ಮಾಡಿದ ನೀಚರ ‘ಸರ್ಕಾರಿ ಜಯಂತಿ’ ಮಾಡಿದವರಿಗೆ ನಿಮ್ಮ ವೋಟು ಹಾಕಬೇಕೆ ಅಂತ ಯೋಚಿಸಿ ಎಂದು ಹೇಳಿದ್ದಾರೆ.

ಇಡೀ ರಾಜ್ಯವನ್ನ, ರಾಷ್ಟ್ರವನ್ನೇ ಇಸ್ಲಾಮೀಕರಣ ಮಾಡಬೇಕಂಬ ಉದ್ದೇಶದಿಂದ ಟಿಪ್ಪು ಸುಲ್ತಾನ ‘ನಾಡಹಬ್ಬ’ ದಸರಾ ಹಬ್ಬವನ್ನು ನಿಲ್ಲಿಸಿದನು. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಗಳಾಗಿದ್ದಾಗ ಪ್ರಜಾಪೀಡಕ, ಕನ್ನಡದ್ರೋಹಿ, ಮತಾಂಧನಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರೇ ‘ಜಯಂತಿ’ ಆಚರಿಸಿದರು ಎಂದು ಕಿಡಿಕಾರಿದ್ದಾರೆ.

ಮತದಾನದ ದಿನದಂದು ಮೈ ಮರೆಯದಿರಿ

ಮೈಸೂರನ್ನು ನಜರಾಬಾದ್, ದೇವನಹಳ್ಳಿಯನ್ನು ಯೂಸುಫಾಬಾದ್, ಚಿತ್ರದುರ್ಗವನ್ನು ಫಾರೂಕ್-ಈ-ಹಿಸ್ಸಾರ್, ಮಡಿಕೇರಿಯನ್ನು ಜಾಫ್ಫರಾಬಾದ್, ಸಕ್ಲೇಶಪುರವನ್ನು ಮಂಜರಾಬಾದ್ ಎಂದು ಪರ್ಷಿಯನ್ ಭಾಷೆ ಹೇರಿಕೆ ಮಾಡಿದ್ದು ಕಾಂಗ್ರೆಸ್​. ನೀಚ ಅರಸನ ಪಾಠವನ್ನು ಪಠ್ಯಕ್ರಮದಲ್ಲಿ ಪರಿಚಯಿಸಿ ಮತ್ತು ಕನ್ನಡ ದ್ರೋಹಿ ಟಿಪ್ಪು ಜಯಂತಿ ಮಾಡಿದ್ದು ಕಾಂಗ್ರೆಸ್ ಅನ್ನೋದನ್ನು ಮರಿಬೇಡಿ. ಮತದಾನದ ದಿನದಂದು ಮೈ ಮರೆಯದಿರಿ ಎಂದು ಮತದಾರರಿಗೆ ಶಾಸಕ ಯತ್ನಾಳ್ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES