ಶಿವಮೊಗ್ಗ : ಗುಜರಾತ್ನಲ್ಲಿ ಪ್ರತಿದಿನ ಆರು ಜನರ ಮೇಲೆ ರೇಪ್ ಆಗುತ್ತಿದೆ. ಅದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಬಿಜೆಪಿಗರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಇಂತಹ ಘಟನೆ ಆದಾಗ ರಾಜಕೀಯ ಬಿಟ್ಟು ಕಾನೂನು ಬದ್ದವಾಗಿ ಏನು ಮಾಡಬೇಕು ಅದನ್ನು ಮಾಡಬೇಕು. ಜೊತೆಗೆ ಈ ತರಹ ಆಗದೇ ಇರೋತರ ಮಾಡಬೇಕು ಎಂದು ಹೇಳಿದ್ದಾರೆ.
ಇದು ರಾಜಕೀಯವಾಗಿ ಬಳಸುವ ಅಭ್ಯಾಸ ಬಿಜೆಪಿಯವರಿಗೆ ಮೊದಲಿನಿಂದಲೂ ಇದೆ. ಕುಟುಂಬಕ್ಕೆ ಸಾಂತ್ವನ ಹೇಳಿದರೆ ಸಾಕಾಗೋದಿಲ್ಲ. ಇಂತಹ ಘಟನೆ ಆಗಬಾರದು. ಆ ತರಹ ನೋಡಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತೆ ಎಂದು ತಿಳಿಸಿದ್ದಾರೆ.
ಮೋದಿ ಕೀಳು ಮಟ್ಟಕ್ಕೆ ಇಳಿಯಬಾರದು
ಖಾಲಿ ಚಂಬೂ ಕೊಟ್ಟವರೇ ಬಿಜೆಪಿಯವರು. ನಮ್ಮ ಹತ್ತಿರ ತೆರಿಗೆ ತಗೊಂಡು ನಮಗೆ ಚಂಬೂ ಕೊಡ್ತಾರೆ. ದೇಶದ ಪ್ರಧಾನಿಗಳು ಕೀಳು ಮಟ್ಟಕ್ಕೆ ಇಳಿಯಬಾರದು. ಪಾಕಿಸ್ತಾನ, ಬಾಂಗ್ಲಾದೇಶ ಸೇರಿ ಬಿಜೆಪಿಯವರು 400 ಸ್ಥಾನಗಳ ಲೆಕ್ಕ ಹಾಕಿರಬೇಕು. ಬಿಜೆಪಿ ಅವರಿಗೆ ಅಷ್ಟು ಬರೋದಿಲ್ಲ. ನಮ್ಮ ಗ್ಯಾರಂಟಿ ಇದೆ, ಅದರ ಮೇಲೆ ಚುನಾವಣೆ ಮಾಡುತ್ತೇವೆ. ಈ ದೇಶದಲ್ಲಿ ಈ ಬಾರಿ ಬದಲಾವಣೆ ಆಗೇ ಆಗುತ್ತದೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.